ಸರ್ಕಾರಿ ಐಟಿಐನ ಎಸ್.ಎ. ಬಿರಾದಾರ್ ನಿಧನ ; ಅಹಿರಸಂಗದಲ್ಲಿ ಅಂತ್ಯಕ್ರಿಯೆ
ಮೃತರಿಗೆ
ಸರ್ಕಾರಿ ಐಟಿಐನ ಎಸ್.ಎ. ಬಿರಾದಾರ್ ನಿಧನ ಅಹಿರಸಂಗದಲ್ಲಿ ಅಂತ್ಯಕ್ರಿಯೆ


ಬಳ್ಳಾರಿ, 10 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ರೇಡಿಯೋ ಪಾರ್ಕ್ನಲ್ಲಿ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ನಲ್ಲಿ 28 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ತರಬೇತಿ ಅಧಿಕಾರಿಯಾಗಿದ್ದ ಎಸ್.ಎ. ಬಿರಾದಾರ್ (53) ಅವರು ಮಂಗಳವಾರ ರಾತ್ರಿ ಉಂಟಾದ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತರಿಗೆ ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಗಳು, ಇದ್ದಾರೆ.

ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದ ಮೂಲ ನಿವಾಸಿಗಳಾಗಿದ್ದ ಎಸ್.ಎ. ಬಿರಾದಾರ್ ಅವರು ಬಳ್ಳಾರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಯೇ ಸೇವೆ ಸಲ್ಲಿಸಿದ್ದಾರೆ. ಮಂಗಳವಾರ ರಾತ್ರಿ ಏಕಾಏಕಿ ಹೃದಯ ನೋವು ಕಾಣಿಸಿಕೊಂಡು, ಉಸಿರಾಟದಲ್ಲಿ ತೀವ್ರ ತೊಂದರೆ ಉಂಟಾಗಿದೆ.

ಕುಟುಂಬದ ಸದಸ್ಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಮೃತರ ಅಂತ್ಯಕ್ರಿಯೆಯು ಅಹಿರಸಂಗ ಗ್ರಾಮದಲ್ಲಿ ವೀರಶೈವ ಸಂಪ್ರದಾಯಗಳ ಪ್ರಕಾರ ಗುರು ಹಿರಿಯರ ಸಮ್ಮುಖದಲ್ಲಿಗುರುವಾರ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande