ಸುರಿನಾಮ್ ಅಭಿವೃದ್ಧಿ ಪಥದಲ್ಲಿ ಭಾರತ ವಿಶ್ವಾಸಾರ್ಹ ಪಾಲುದಾರ : ಎಸ್. ಜೈಶಂಕರ್
ಪರಮರಿಬೊ, 08 ಮೇ (ಹಿ.ಸ.) : ಆ್ಯಂಕರ್ : ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸುರಿನಾಮ್ ರಾಜಧಾನಿ ಪರಮರಿಬೊನಲ್ಲಿ ನಡೆದ ‘ಪ್ರಗತಿಗಾಗಿ ಪಾಲುದಾರಿಕೆ’ ವಿಷಯಾಧಾರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತ–ಸುರಿನಾಮ್ ಸಹಕಾರ ಸಂಬಂಧಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸುರಿನಾಮ್ ವಿದೇಶಾಂಗ ಸಚಿವ
ಜೈಶಂಕರ


ಪರಮರಿಬೊ, 08 ಮೇ (ಹಿ.ಸ.) :

ಆ್ಯಂಕರ್ : ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸುರಿನಾಮ್ ರಾಜಧಾನಿ ಪರಮರಿಬೊನಲ್ಲಿ ನಡೆದ ‘ಪ್ರಗತಿಗಾಗಿ ಪಾಲುದಾರಿಕೆ’ ವಿಷಯಾಧಾರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತ–ಸುರಿನಾಮ್ ಸಹಕಾರ ಸಂಬಂಧಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುರಿನಾಮ್ ವಿದೇಶಾಂಗ ಸಚಿವ ಮೆಲ್ವಿನ್ ಬೌವಾ ಉಪಸ್ಥಿತರಿದ್ದರೆಂದು ಜೈಶಂಕರ್ ತಿಳಿಸಿದ್ದಾರೆ. ಕಾರ್ಯಕ್ರಮ ಆಯೋಜನೆಗೆ ಸುರಿನಾಮ್ ವಿದೇಶಾಂಗ ಇಲಾಖೆಗೆ ಅವರು ಧನ್ಯವಾದ ಸಲ್ಲಿಸಿದರು.

ಇಂದಿನ ಸಂಕೀರ್ಣ ಮತ್ತು ಸವಾಲಿನ ಜಗತ್ತಿಗೆ ಪ್ರಗತಿಯ ಅಗತ್ಯ ಹೆಚ್ಚಿದ್ದು, ಅದನ್ನು ಬಲವಾದ ಪಾಲುದಾರಿಕೆಗಳ ಮೂಲಕವೇ ಸಾಧಿಸಬಹುದು ಎಂದು ಜೈಶಂಕರ್ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಹಿತಾಸಕ್ತಿಗಳನ್ನು ಜಾಗತಿಕ ಒಳಿತಿನೊಂದಿಗೆ ಸಮತೋಲನಗೊಳಿಸಬಲ್ಲ ವಿಶ್ವಾಸಾರ್ಹ ಪಾಲುದಾರಿಕೆಯ ಮಹತ್ವವನ್ನು ಅವರು ಒತ್ತಿಹೇಳಿದರು.

ಜಾಗತಿಕ ರಾಜಕೀಯದಲ್ಲಿ ಭಾರತದ ಪಾತ್ರವನ್ನು ವಿವರಿಸಿದ ಅವರು, ಭಾರತದ ಅಭಿವೃದ್ಧಿ ಪಾಲುದಾರಿಕೆಗಳು, ಜಾಗತಿಕ ಕಾರ್ಯಪಡೆ, ವಿಪತ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವ ಸಾಮರ್ಥ್ಯ ಹಾಗೂ ಹೊಸ ಅಂತರರಾಷ್ಟ್ರೀಯ ಉಪಕ್ರಮಗಳ ಕುರಿತು ವಿವರಿಸಿದರು.

ಭಾರತವು ಸುರಿನಾಮ್ನ ಅಭಿವೃದ್ಧಿ ಪಥದಲ್ಲಿ ವಿಶ್ವಾಸಾರ್ಹ ಸಹಭಾಗಿಯಾಗಿ ಕಾರ್ಯನಿರ್ವಹಿಸಲಿದ್ದು, ಭಾರತ–ಸುರಿನಾಮ್ ಸ್ನೇಹದ ಮುಂದಿನ ಅಧ್ಯಾಯವನ್ನು ಉಭಯ ರಾಷ್ಟ್ರಗಳು ಜಂಟಿಯಾಗಿ ಬರೆಯಲಿವೆ ಎಂದು ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande