
ನವದೆಹಲಿ, 30 ಮೇ (ಹಿ.ಸ.) :
ಆ್ಯಂಕರ್ : ವಿನಮ್ರತೆ, ಕ್ಷಮಾಶೀಲತೆ ಮತ್ತು ಉತ್ತಮ ನಡತೆ ವ್ಯಕ್ತಿತ್ವದ ನಿಜವಾದ ಆಭರಣಗಳಾಗಿದ್ದು, ಇದೇ ಮೌಲ್ಯಗಳೊಂದಿಗೆ ದೇಶವಾಸಿಗಳು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, “ವಿನಮ್ರತೆ, ಕ್ಷಮಾಶೀಲತೆ ಮತ್ತು ಉತ್ತಮ ಆಚಾರ-ವಿಚಾರಗಳೇ ವ್ಯಕ್ತಿತ್ವದ ನಿಜವಾದ ಆಭರಣಗಳು. ಈ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಜನರು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅವರು ಸಂಸ್ಕೃತದ ಒಂದು ಸುಭಾಷಿತವನ್ನು ಹಂಚಿಕೊಂಡಿದ್ದಾರೆ :
ತೇಜಃ ಕ್ಷಮಾ ಧೃತಿಃ ಶೌಚಮದ್ರೋಹೋ ನಾತಿಮಾನಿತಃ । ಭವನ್ತಿ ಸಂಪದಂ ದೈವಿಮಭಿಜಾತಸ್ಯ ಭಾರತ ।
ಈ ಸುಭಾಷಿತದ ಅರ್ಥವನ್ನು ವಿವರಿಸಿದ ಪ್ರಧಾನಿ, ತೇಜಸ್ಸು, ಕ್ಷಮೆ, ಧೈರ್ಯ, ಪಾವಿತ್ರ್ಯ, ಯಾರ ಮೇಲೂ ದ್ವೇಷಭಾವನೆ ಇಟ್ಟುಕೊಳ್ಳದಿರುವುದು ಹಾಗೂ ಅಹಂಕಾರದಿಂದ ದೂರವಿರುವುದು ವ್ಯಕ್ತಿಯ ದೈವಿಕ ಗುಣಗಳಾಗಿದ್ದು, ಇವುಗಳೇ ಶ್ರೇಷ್ಠ ವ್ಯಕ್ತಿತ್ವದ ಗುರುತುಗಳಾಗಿವೆ ಎಂದು ತಿಳಿಸಿದ್ದಾರೆ.
ಪ್ರಧಾನಿಯ ಈ ಸಂದೇಶವು ಸಮಾಜದಲ್ಲಿ ನೈತಿಕ ಮೌಲ್ಯಗಳು, ಸೌಹಾರ್ದತೆ ಮತ್ತು ಮಾನವೀಯ ಗುಣಗಳನ್ನು ಬೆಳೆಸುವ ಅಗತ್ಯತೆಯನ್ನು ಮತ್ತೊಮ್ಮೆ ಒತ್ತಿ ಹೇಳಿದ್ದು, ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ವ್ಯಕ್ತಿತ್ವ ವಿಕಾಸದ ಮಹತ್ವವನ್ನು ಪ್ರತಿಪಾದಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.