ಕಠಿಣ ಕಾನೂನು ಜಾರಿಗೆ ಎಐಎಂಎಸ್ಎಸ್ ಆಗ್ರಹ
ಬಳ್ಳಾರಿ, 25 ಮಾರ್ಚ್ (ಹಿ.ಸ.) ಆ್ಯಂಕರ್ : ಕರ್ನಾಟಕ ಹಾಗೂ ದೇಶಾದ್ಯಂತ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಐಎಂಎಸ್ಎಸ್ ಆಗ್ರಹಿಸಿದೆ. ಎಐಎಂಎಸ್ಎಸ್ನ ಕೆ.ಎಂ. ಈಶ್ವರಿ ಅವರ ನೇತೃತ್ವದಲ್ಲಿ ಬ
ಕಠಿಣ ಕಾನೂನು ಜಾರಿಗೆ ಎಐಎಂಎಸ್ಎಸ್ ಆಗ್ರಹ


ಕಠಿಣ ಕಾನೂನು ಜಾರಿಗೆ ಎಐಎಂಎಸ್ಎಸ್ ಆಗ್ರಹ


ಬಳ್ಳಾರಿ, 25 ಮಾರ್ಚ್ (ಹಿ.ಸ.)

ಆ್ಯಂಕರ್ :

ಕರ್ನಾಟಕ ಹಾಗೂ ದೇಶಾದ್ಯಂತ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಐಎಂಎಸ್ಎಸ್ ಆಗ್ರಹಿಸಿದೆ.

ಎಐಎಂಎಸ್ಎಸ್ನ ಕೆ.ಎಂ. ಈಶ್ವರಿ ಅವರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಕೇಂದ್ರ ಮತ್ತು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿಬರ್ಂಧಿಸಿರುವುದು ಸ್ವಾಗತಾರ್ಹ. ಅದರಂತೆಯೇ ಕರ್ನಾಟಕ ಹಾಗೂ ದೇಶಾದ್ಯಂತ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಎಐಎಂಎಸ್ಎಸ್ ಪದಾಧಿಕಾರಿಗಳಾದ ಗಿರಿಜಾ, ವಿದ್ಯಾ, ಶೋಭಾ, ಸೌಮ್ಯ, ಕರಿಬಸಮ್ಮ, ವಿಜಯಲಕ್ಷ್ಮಿ, ಪದ್ಮ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande