ರೈತ ಸಂಪರ್ಕ ಕೇಂದ್ರ ; ಗುತ್ತಿಗೆ ನೌಕರ ರಾಜು ಆತ್ಮಹತ್ಯೆ
ಸಂಡೂರು, 16 ಮಾರ್ಚ್ (ಹಿ.ಸ.) ಆ್ಯಂಕರ್: ಸಂಡೂರು ರೈತ ಸಂಪರ್ಕ ಕೇಂದ್ರದಲ್ಲಿ ಒಬ್ಬ ಅಧಿಕಾರಿಯು ಕಿರುಕುಳ ನೀಡುತ್ತಿದ್ದಾರೆ ಎಂದು ಎರೆಡು ಪುಟದ ಸೂಸೈಡ್ ನೋಟು ಬರೆದಿಟ್ಟು ಊರ ಹೊರಗಿನ ಗಿಡಕ್ಕೆ ನೇಣು ಬಿಗಿದುಕೊಂಡು ಗುತ್ತಿಗೆ ಆಧಾರದ ಅಕೌಂಟೆಂಟ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ
ರೈತ ಸಂಪರ್ಕ ಕೇಂದ್ರ ; ಗುತ್ತಿಗೆ ನೌಕರ ರಾಜು ಆತ್ಮಹತ್ಯೆ


ಸಂಡೂರು, 16 ಮಾರ್ಚ್ (ಹಿ.ಸ.)

ಆ್ಯಂಕರ್: ಸಂಡೂರು ರೈತ ಸಂಪರ್ಕ ಕೇಂದ್ರದಲ್ಲಿ ಒಬ್ಬ ಅಧಿಕಾರಿಯು ಕಿರುಕುಳ ನೀಡುತ್ತಿದ್ದಾರೆ ಎಂದು ಎರೆಡು ಪುಟದ ಸೂಸೈಡ್ ನೋಟು ಬರೆದಿಟ್ಟು ಊರ ಹೊರಗಿನ ಗಿಡಕ್ಕೆ ನೇಣು ಬಿಗಿದುಕೊಂಡು ಗುತ್ತಿಗೆ ಆಧಾರದ ಅಕೌಂಟೆಂಟ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಮೃತನು ರಾಜು (35). ಈತನು ಚೋರನೂರಲ್ಲಿ ಗುತ್ತಿಗೆ ಆಧಾರದ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿ, ಎರೆಡು ವರ್ಷಗಳ ಮೇಲೆ ಕಾರ್ಯನಿರ್ವಹಿಸಿ, ಸಂಡೂರು ಪಟ್ಟಣಕ್ಕೆ ವರ್ಗಾವಣೆ ಮಾಡಿದ್ದರು.

ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಘವೇಂದ್ರ ಎನ್ನುವವರು ರಾಜು ಅವರಿಗೆ ಉದ್ದೇಶಪೂರ್ವಕ ಕಿರುಕುಳ ನೀಡುತ್ತಿದ್ದರು. ನಾಲ್ಕು ತಿಂಗಳಿಂದ ವೇತನ ಪಾವತಿಸಿಲ್ಲ. ವಿನಾಕಾರಣ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮೃತನ ಪತ್ನಿ ಪ್ರೇಮಾ ಅವರು ಚೋರನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande