
ನವದೆಹಲಿ, 06 ಜನವರಿ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಾಚೀನ ಸಂಸ್ಕೃತ ಶ್ಲೋಕವೊಂದನ್ನು ಹಂಚಿಕೊಂಡು, ಸಿಹಿ ಹಾಗೂ ಪ್ರೀತಿಯ ಮಾತುಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ.
‘ಎಕ್ಸ್’ ನಲ್ಲಿ ಶ್ಲೋಕವನ್ನು ಹಂಚಿಕೊಂಡ ಪ್ರಧಾನಿ ಮೋದಿ, “ಎಲ್ಲಾ ಜೀವಿಗಳು ಆಹ್ಲಾದಕರ ಮಾತುಗಳನ್ನು ಕೇಳಿ ಸಂತೋಷಪಡುತ್ತವೆ. ಹಾಗಿರುವಾಗ ಪದಗಳಲ್ಲಿ ಬಡತನವೆಂದರೆ ಏನು?” ಎಂದು ಬರೆದಿದ್ದಾರೆ.
ಈ ಶ್ಲೋಕದ ಅರ್ಥವೇನೆಂದರೆ—ಎಲ್ಲಾ ಜೀವಿಗಳು ಸೌಮ್ಯ, ಸಿಹಿ ಮತ್ತು ಪ್ರೀತಿಯ ಮಾತುಗಳಿಂದ ಸಂತೋಷ ಪಡೆಯುತ್ತವೆ. ಆದ್ದರಿಂದ ಮಾನವನು ಸದಾ ವಿನಯಪೂರ್ಣ ಹಾಗೂ ಮೃದುವಾದ ಧ್ವನಿಯಲ್ಲಿ ಮಾತನಾಡಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ.
ಈ ಶ್ಲೋಕವು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಪ್ರತಿಬಿಂಬಿಸುವುದರ ಜೊತೆಗೆ, ಸಂಸ್ಕೃತ ಭಾಷೆಯ ಶ್ರೀಮಂತ ಪರಂಪರೆಯನ್ನೂ ಎತ್ತಿ ತೋರಿಸುತ್ತದೆ. ಭಾರತೀಯ ದರ್ಶನದಲ್ಲಿ ಮಾತು ಅಮೃತದಂತೆ ಎಂದು ಪರಿಗಣಿಸಲಾಗಿದ್ದು, ಸೌಹಾರ್ದ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಯಲ್ಲಿ ಸಿಹಿ ಮಾತುಗಳಿಗೆ ಮಹತ್ವದ ಸ್ಥಾನವಿದೆ ಎಂಬುದನ್ನು ಪ್ರಧಾನಿ ಮೋದಿ ಅವರ ಈ ಸಂದೇಶ ನೆನಪಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa