
ಕೊಪ್ಪಳ, 03 ಜನವರಿ (ಹಿ.ಸ.) :
ಆ್ಯಂಕರ್ : 20ಕ್ಕೂ ಹೆಚ್ಚು ಹಳ್ಳಿಗಳು, ಕೊಪ್ಪಳ ಭಾಗ್ಯನಗರದ ಅರ್ಧ ಭಾಗ ಕಾರ್ಖಾನೆಗಳ ವಿಷಾನಿಲ, ಕಪ್ಪು ಹೊಗೆ, ದೂಳುಗಳಿಂದ ಹಾಳಾಗಿದ್ದು ಮತ್ತು ನದಿಯನ್ನೇ ನುಂಗುವ ಕಾರ್ಖಾನೆಗಳ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಎ.ಎಂ. ಮದರಿ ಹೇಳಿದರು.
ಅವರು ನಗರಸಭೆ ಮುಂದುಗಡೆ ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್ ಇಂಡಿಯಾ, ವನ್ಯಾ, ಐಎಲ್ಸಿ ಸೇರಿ ಇತರೆ ಎಲ್ಲಾ ಕಾರ್ಖಾನೆಗಳ ವಿಸ್ತರಣೆ ಮತ್ತು ಆರಂಭ ವಿರೋಧಿಸಿ ಕಳೆದ 65 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಟ ಧರಣಿಯಲ್ಲಿ ಮಾತನಾಡಿದರು.
ಜನಸಾಮನ್ಯರು ಹೋರಾಟಕ್ಕೆ ಅಣಿಯಾದ ಕೂಡಲೇ ಹೊಡ ಬಗೆಯ ಆಯಾಮ ಸಿಗುತ್ತದೆ, ಈಗಾಗಲೇ ಹಲವು ಸಂಘಟನೆಗಳು, ರಾಜ್ಯಮಟ್ಟದ ಸಾಹಿತಿ, ಹೋರಾಟಗಾರರು, ರೈತರು ಭಾಗವಹಿಸಿದ್ದಾರೆ. ಜಾತ್ರೆಯ ನಂತರ ಇನ್ನಷ್ಟು ವೇಗ ಪಡೆಯಲಿದೆ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ವೀರಣ್ಣ ಬಣಗಾರ, ರವಿಂದ್ರಗೌಡ ಪಾಟೀಲ್, ಶಿವಪ್ಪ ಜಲ್ಲಿ, ಸಂಜೀವಮ್ಮ ಮುಂಡರಗಿ, ಗಂಗಮ್ಮ ಕೊಡೇಕಲ್, ಶಿವಪ್ಪ ಹಡಪದ, ಪುಷ್ಪಲತಾ ಏಳುಬಾವಿ, ಮೂಕಪ್ಪ ಮೇಸ್ತ್ರಿ ಬಸಾಪೂರ, ವೀರಣ್ಣ ಹುರಕಡ್ಲಿ, ಭೀಮಪ್ಪ ಯಲಬುರ್ಗಾ, ಮಖ್ಯುಲ್ ರಾಯಚೂರು, ಡಿ. ಎಂ. ಬಡಿಗೇರ, ಭೀಮಸೇನ ಕಲಕೇರಿ, ಮೈತ್ರಾ, ನೇತ್ರಾವತಿ, ರುಕ್ಸಾನಾ ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್