


ಕೊಪ್ಪಳ, 03 ಜನವರಿ (ಹಿ.ಸ.) :
ಆ್ಯಂಕರ್ : ಗವಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಮಹಾದಾಸೋಹಕ್ಕೆ ಅನೇಕ ಭಕ್ತರು ವಿವಿಧ ರೀತಿಯ ಖಾದ್ಯಗಳ ಸೇವೆ ಸಮರ್ಪಿಸುವುದು ಜಾತ್ರ ಮಹೋತ್ಸವದ ವಿಶೇಷತೆ. ಇಂದು ಸಿಂಧನೂರಿನ ಗೆಳೆಯರ ಬಳಗದ ವತಿಯಿಂದ 5 ಮತ್ತು 6 ರಂದು ಭಕ್ತರಿಗೆ ಮೈಸೂರು ಪಾಕ್ ಸವಿಯಲು ನೀಡುತ್ತಾರೆ.
ಇಂದು ಬೆಳಗ್ಗೆ 6 ಗಂಟೆಯಿಂದ ಸಿದ್ಧಪಡಿಸತೊಡಗಿದ್ದು, ಇದು ರಾತ್ರಿ 11ರವರೆಗೆ ಮತ್ತು ನಾಳೆಯು ಸಹ ಮುಂದುವರಿಯಲಿದೆ. ಮೈಸೂರು ಪಾಕ್ ಸಿದ್ಧಪಡಿಸುವುದಕ್ಕೆ 60ಕ್ವಿಂಟಲ್ ಸಕ್ಕರೆ, 5000 ಲೀಟರ್ ಅಡುಗೆ ಎಣ್ಣೆ, 30ಕ್ವಿಂಟಲ್ ಕಡಲೆ ಹಿಟ್ಟು, 5ಕ್ವಿಂಟಲ್ ಮೈದ ಹಿಟ್ಟು, 30 ಕ್ವಿಂಟಲ್ ತುಪ್ಪ, 50ಕೆಜಿ ಯಾಲಕ್ಕಿ ಸಾಮಗ್ರಿಗಳೊಂದಿಗೆ ಖಾದ್ಯ ಸಿದ್ಧಪಡಿಸುತ್ತಿದ್ದಾರೆ.
ಅಂದಾಜು ಹತ್ತರಿಂದ ಹನ್ನೆರಡು ಲಕ್ಷ ಜನ ಇದನ್ನು ಸೇವಿಸಬಹುದಾಗಿದೆ. ತಯಾರಿಸುವುದಕ್ಕೆ ಅಥಣಿ, ಧನಾವರ, ಮಸ್ಕಿ, ಗಬ್ಬುರ್, ಬಳಗಾನೂರ, ತಾವರಗೇರಾ ಮುಂತಾದ 100ಕ್ಕೂ ಹೆಚ್ಚು ಬಾಣಸಿಗರು ಆಗಮಿಸಿ ತಯ್ಯಾರಿಕೆಯಲ್ಲಿ ತೊಡಗಿದ್ದಾರೆ. ಅವರಿಗೆ ಸಾಯಕರಾಗಿ ಮತ್ತು ಇತರೆ ವ್ಯವಸ್ಥೆಗಾಗಿ 200ಕ್ಕೂ ಹೆಚ್ಚು ಜನ ತಯ್ಯಾರಿಕೆ ಸೇವೆಯಲ್ಲಿ ಸಿದ್ಧಪಡಿಸಕೊಂಡಿರುತ್ತಾರೆ ಎಂದು ಶ್ರೀ ಗವಿಮಠದ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್