
ಬೆಳಗಾವಿ, 15 ಜನವರಿ (ಹಿ.ಸ.) :
ಆ್ಯಂಕರ್ : ದೇಶದ ರಕ್ಷಣೆಗೆ ಸದಾ ಸಿದ್ದ ವಾಗಿರುವ ಅಪ್ರತಿಮ ವೀರರಿಗೆ ಸಚಿವ ಸತೀಶ್ ಜಾರಕಿಹೊಳಿ 'ಭಾರತೀಯ ಸೇನಾ ದಿನ'ದ ಶುಭಾಶಯ ಕೋರಿದ್ದಾರೆ.
1949ರಲ್ಲಿ ಕನ್ನಡಿಗರ ಹೆಮ್ಮೆ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅವರು ಭಾರತೀಯ ಸೇನೆಯ ಮೊದಲ ದಂಡನಾಯಕರಾಗಿ ಅಧಿಕಾರ ವಹಿಸಿಕೊಂಡ ಈ ಐತಿಹಾಸಿಕ ದಿನವನ್ನು ಭಾರತೀಯ ಸೇನಾ ದಿನ ಎಂದು ಆಚರಿಸಲಾಗುತ್ತದೆ. ಸೈನಿಕರ ಅಪ್ರತಿಮ ತ್ಯಾಗ ಮತ್ತು ದೇಶಭಕ್ತಿಯನ್ನು ನಾವೆಲ್ಲರೂ ಸ್ಮರಿಸಿ, ಅವರ ಶೌರ್ಯಕ್ಕೆ ನಮನಗಳನ್ನು ಸಲ್ಲಿಸೋಣ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa