ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ; ಅಪಾರ ಹಾನಿ
ವಿಜಯಪುರ, 15 ಜನವರಿ (ಹಿ.ಸ.) : ಆ್ಯಂಕರ್ : ಆಕಸ್ಮಿಕ ಅಗ್ನಿ ಅವಘಡದಿಂದ ಶೀಟ್‌‌ನಿಂದ ನಿರ್ಮಾಣ ಮಾಡಿದ್ದ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಬಳಿಯ ಪಾಂಗ್ರೂನ್ ದೊಡ್ಡಿ ಬಳಿ ನಡೆದಿದೆ. ತುಕಾರಾಮ್ ಚವ್ಹಾಣ ಎಂಬುವರಿಗೆ ಸೇರಿದ ಶಡ್ ಮನೆ ಬೆಂಕಿಗಾಹುತಿ ಆಗಿದೆ. ಇ
ಬೆಂಕಿ


ವಿಜಯಪುರ, 15 ಜನವರಿ (ಹಿ.ಸ.) :

ಆ್ಯಂಕರ್ : ಆಕಸ್ಮಿಕ ಅಗ್ನಿ ಅವಘಡದಿಂದ ಶೀಟ್‌‌ನಿಂದ ನಿರ್ಮಾಣ ಮಾಡಿದ್ದ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಬಳಿಯ ಪಾಂಗ್ರೂನ್ ದೊಡ್ಡಿ ಬಳಿ ನಡೆದಿದೆ.

ತುಕಾರಾಮ್ ಚವ್ಹಾಣ ಎಂಬುವರಿಗೆ ಸೇರಿದ ಶಡ್ ಮನೆ ಬೆಂಕಿಗಾಹುತಿ ಆಗಿದೆ. ಇನ್ನು ಮನೆಯಲ್ಲಿದ್ದ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನಾಭರಣ ಸುಟ್ಟು ಭಸ್ಮವಾಗಿದೆ. ನಗದು ಹಾಗೂ ಚಿನ್ನಾಭರಣ ಸೇರಿದಂತೆ ಶೆಡ್ ನಲ್ಲಿದ್ದ ವಸ್ತುಗಳನ್ನು ಕಳೆದುಕೊಂಡು ಕುಟುಂಬ ಬೀದಿ ಪಾಲಾಗಿದೆ.

ವಿಜಯಪುರ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande