ನೀರಾವರಿಯಿಂದ ರೈತರ ಪ್ರಗತಿ‌ ಸಾಧ್ಯ- ಎನ್. ಎಸ್. ಬೋಸರಾಜು
ರಾಯಚೂರು, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅನ್ನದಾತರಾದ ರೈತರಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಮುದ್ದನಗುಡ್ಡಿ ಏತ ನೀರಾವರಿ ನಿರ್ಮಾಣ ಮೂಲಕ ಮುದ್ದನಗುಡ್ಡಿ, ಪೋತ್ನಾಳ, ಕರಾಬ್ ದಿನ್ನಿ ಸೇರಿದಂತೆ ಸುಮಾರು 1600 ಎಕರೆಗೆ ನೀರಾಡುವ ಮಹತ್ವದ ಯೋಜನೆ ಇದಾಗಿದೆ ಎಲ್ಲರು ಸದುಪರೋಗ ಪಡೆದುಕೊಳ್
ನೀರಾವರಿಯಿಂದ ರೈತರ ಪ್ರಗತಿ‌ ಸಾಧ್ಯ- ಎನ್ ಎಸ್ ಬೋಸರಾಜು


ರಾಯಚೂರು, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅನ್ನದಾತರಾದ ರೈತರಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಮುದ್ದನಗುಡ್ಡಿ ಏತ ನೀರಾವರಿ ನಿರ್ಮಾಣ ಮೂಲಕ ಮುದ್ದನಗುಡ್ಡಿ, ಪೋತ್ನಾಳ, ಕರಾಬ್ ದಿನ್ನಿ ಸೇರಿದಂತೆ ಸುಮಾರು 1600 ಎಕರೆಗೆ ನೀರಾಡುವ ಮಹತ್ವದ ಯೋಜನೆ ಇದಾಗಿದೆ ಎಲ್ಲರು ಸದುಪರೋಗ ಪಡೆದುಕೊಳ್ಳಬೇಕು ಎಂದು ಸಚಿವ ಎನ್. ಎಸ್. ಬೋಸರಾಜು ಅವರು ತಿಳಿಸಿದ್ದಾರೆ.

ಮಾನ್ವಿ ವಿಧಾನ ಸಭಾ ಕ್ಷೇತ್ರದ ಮುದ್ದನಗುಡ್ಡಿ ಗ್ರಾಮದಲ್ಲಿ ಮುದ್ದನಗುಡ್ಡಿ ಏತ ನೀರಾವರಿ ಯೋಜನೆಗೆ ಸಚಿವ ಎನ್ಎಸ್ ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ನೀರಾವರಿಯಿಂದ ರೈತರ ಪ್ರಗತಿಗಾಗಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಹಲವಾರು ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅಂತೆಯೆ ಇಲ್ಲಿನ ಸ್ಥಳಿಯ ರೈತರ ಬೇಡಿಕೆಯಂತೆ ತಾಂತ್ರಿಕ ವರದಿಯಂತೆ ವೈಜ್ಞಾನಿಕವಾಗಿ ಮುದ್ದನಗುಡ್ಡಿ ಏತ ನೀರಾವರಿ ಯೋಜನೆಯನ್ನು ನಿರ್ಮಿಸಲಾಗುತ್ತಿದೆ ಎಂದರು.

ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಗುಣಮಟ್ಟದೊಂದಿಗೆ ಕಾಮಗಾರಿಯನ್ನು ನಿರ್ವಹಿಸಬೇಕು. ಇಂತಹ ಕಾಮಗಾರಿಗಳಿಂದ ಶಾಶ್ವತವಾಗಿ‌ ರೈತರ ಕೈ ಬಲಪಡಿಸಿದಂತಾಗುತ್ತದೆ ಹಾಗಾಗಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕೆಂದು ಇದಕ್ಕೆ ರೈತರು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.

ಗ್ರಾಮೀಣ ಭಾಗವನ್ನು ನೀರಾವರಿ ಮಾಡುವ ಮೂಲಕ ಜನರು ಸ್ವಾವಲಂಬಿಗಳಾಗಿ ಜೀವನ‌ ನಡೆಸಲು ಅನುಕೂಲವಾಗಲಿದೆ. ಈ ಭೂ ಪ್ರದೇಶ ನೀರಾವರಿಯಾಗುವುದರಿಂದ ಉದ್ಯೋಗ ಹರಿಸಿ ಗುಳೆ ಹೋಗುವುದು ತಪ್ಪಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕ ಅದ್ಯಕ್ಷರಾದ ಬಿಕೆ ಅಮರೇಶಪ್ಪ, ಕಾಂಗ್ರೆಸ್ ಮುಖಂಡರಾದ ಶರಣಯ್ಯ ನಾಯಕ ಗುಡದಿನ್ನಿ, ಬ್ಲಾಕ್ ಅದ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್, ಬಸನಗೌಡ ಮಾಲಿ ಪಾಟಿಲ್, ಕೆ ಶಾಂತಪ್ಪ, ಬಾಲಸ್ವಾಮಿ‌ ಕೊಡ್ಲಿ, ರುದ್ರಪ್ಪ ಅಂಗಡಿ, ದೇವೆಂದ್ರಪ್ಪ, ಖಾಲೀದ್ ಸಾಹೆಬ್, ರೌಡೂರು ಮಹಾಂತೇಶ ಸ್ವಾಮಿ, ಸುಭಾಸ್ ನಾಯಕ, ಖಾಲೀದ್ ಗುರು, ದೊಡ್ಡ ಬಸ್ಸಪ್ಪ ಗೌಡ, ಚಂದ್ರಶೇಖರ್ ಸೇರಿದಂತೆ ಅನೇಕರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande