ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಿಂದೂಸ್ತಾನದಲ್ಲಿರುವವರೆಲ್ಲ ಕಡ್ಡಾಯವಾಗಿ ಜಾತಿ ಜನಗಣತಿಯ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಿಸಿರಿ ಎಂದು ಹಿಂದಿನ ಶಾಸಕರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದ ಯುವ ಮೋರ್ಚಾದಿಂದ ಹಮ್ಮಿಕೊಂಡ ನಮೋ ಮ್ಯಾರಥಾನ್ ಹಾಗೂ ಜಿ.ಎಸ್.ಟಿ ಸಂಭ್ರಮಾಚಾರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾಗರಿಕ ಹಿತವನ್ನು ಬಯಸುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆಶಾಕಿರಣವಾಗಿದ್ದು, ತೆರಿಗೆಯನ್ನು ಇಳಿಸುವುದರ ಮೂಲಕ ಬಡವರಿಗೆ ಆಗುವ ಒರೆಯನ್ನು ಕಡಿಮೆ ಮಾಡುವ ಮೂಲಕ ನವರಾತ್ರಿಗೆ ವಿಷೇಷ ಕೊಡುಗೆಯನ್ನು ನೀಡಿದ ಅವರಿಗೆ ಅಭಿನಂದನೆ ಹೇಳಿದರು.
ಈ ಜಿ.ಎಸ್.ಟಿ ಬಗ್ಗೆ ಜನರಿಗೆ ಕಾರ್ಯಕರ್ತರು ತಿಳುವಳಿಕೆ ನೀಡಬೇಕು. ಕೇಂದ್ರದಿಂದ ಜನವರಿ ತಿಂಗಳಿಂದ ಜಾತಿ ಜನಗಣತಿ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ಸಿದ್ರಾಮಯ್ಯನವರ ಸರಕಾರ ನಡೆಸುತ್ತಿರುವ ಜಾತಿ ಗಣತಿ ಎಲ್ಲ ಧರ್ಮ ಜಾತಿಗಳಲ್ಲಿ ಒಡಕು ತಂದು ಸಮಾಜ ಒಡೆಯುವ ಜನಗಣತಿಯಾಗಿದೆ. ದೇವರಾಜ ಅರಸುಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಬೇಕು ಎಂಬ ಆಶಯನ್ನಿಟ್ಟುಕೊಂಡು ರಾಜ್ಯದಲ್ಲಿ ಧರ್ಮ, ಜಾತಿ ಒಡೆಯುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿತ್ತಿದ್ದಾರೆ ಎಂದರು.
ಕೇಂದ್ರದಿಂದ ಜನವರಿಯಿಂದ ಪ್ರಾರಂಭವಾಗುವ ಜನಗಣತಿ ಅಧಿಕೃತವಾಗಿದ್ದು ಅದರಲ್ಲಿ ಎಲ್ಲರೂ ಕಡ್ಡಾಯವಾಗಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಿರಿ. ಜಾತಿ ಕಾಲಂನಲ್ಲಿ ನಮ್ಮ, ನಮ್ಮ ಜಾತಿಗಳನ್ನು ಉಪ ಜಾತಿಗಳಲ್ಲಿ ಬರೆಯಿಸುವ ಮೂಲಕ ಹಿಂದೂಸ್ತಾನದಲ್ಲಿರುವವರು ನಾವು ಹಿಂದೂಗಳೆಂಬುದನ್ನು ಸಾಭಿತಪಡಿಸಬೇಕು ಎಂದರು.
100 ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಅಕ್ಟೋಬರ 5ರಂದು ಬಾಗಲಕೋಟೆಯಲ್ಲಿ ಜರುಗಲಿದ್ದು ಎಲ್ಲರೂ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಗೋಳಿಬೇಕೆಂದರು.
ರಾಜ್ಯ ಸಭಾ ಸದಸ್ಯ ನಾರಾಯಾಣಸಾ ಭಾಂಡಗೆ ಮಾತನಾಡಿ, ಇದೊವರೆಗೂ ತೆರಿಗೆಯನ್ನು ಹೆಚ್ಚು ಮಾಡುವದನ್ನು ನೋಡಿದ್ದೇವೆ. ಆದರೆ ಮೊದಲ ಬಾರಿಗೆ ತೆರಿಗೆಯನ್ನು ಇಳಿಸುವಂತ ಸರಕಾರವನ್ನು ಮೊದಲ ಬಾರಿಗೆ ನೋಡಿದ್ದು ಖುಷಿಯ ವಿಚಾರ. ಈ ಜಿ.ಎಸ್.ಟಿ ಇಳಿಕೆಯಿಂದ ದೇಶದ ಎಲ್ಲ ಸಾಮಾನ್ಯ ಜನರಿಗೂ ಅನುಕೂಲವಾಗಲಿದೆ. ತೆರಿಗೆ ಇಳಿಕೆಯಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ ಸುಮಾರು 3ಲಕ್ಷ ಕೋಟಿ ಭಾರವಾಗುತ್ತದೆ ಇದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು, ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ವಸ್ತುಗಳು ಸಿಗಬೇಕು ಎಂಬ ಮಹಾದಾಶಯದೊಂದಿಗೆ ತೆರಗೆ ಇಳಸಿಲಾಗಿದೆ. ಭಾರತೀಯರು ಸ್ವದೇಶಿ ವಸ್ತುಗಳನ್ನು ಬಳಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ ಸಪ್ಟೆಂಬರ್ 22 ರಿಂದ ಅಕ್ಟೋಬರ್ 2 ಗಾಂಧಿಜಿ ಜಯಂತಿ ವರೆಗೂ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಸಾರ್ಥಕ ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡಲಾಗುತ್ತಿದೆ. ಜಿ.ಎಸ್.ಟಿ ಇಳಿಕೆ ಜನರಿಗೆ ನವ ಚೈತನ್ಯ ಕೊಟ್ಟಂತಾಗಿದೆ ಬಾಗಲಕೋಟೆಯ ಸಮಸ್ತ ಜನತೆಯ ಪರವಾಗಿ ಪ್ರದಾನಿ ಮೋದಿಯವರಿಗೆ ಕೃತಘ್ನತೆಗಳನ್ನು ತಿಳಿಸುವೆ ಎಂದರು.
ನಮೋ ಮ್ಯಾರಥಾನ : ಬೀಳೂರ ಅಜ್ಜನ ಗುಡಿಯಿಂದ ಬಸವೇಶ್ವರ ವೃತ್ತದ ವರೆಗೂ ನಮೋ ಮ್ಯಾರಥಾನ ನಡಿಗೆ ಎಲ್ಲರ ಗಮನ ಸೆಳೆಯಿತು. ಬಸವೇಶ್ವರ ವೃತ್ತದಲ್ಲಿ ಜಿ.ಎಸ್.ಟಿ ಇಳಿಕೆಯ ಸಂಭ್ರಮವನ್ನು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.
ಸಂಭ್ರಮಾಚರಣೆಯಲ್ಲಿ ಜಿ.ಎನ್.ಪಾಟೀಲ, ಲಕ್ಷ್ಮೀನಾರಾಯಣ ಕಾಸಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ರಾಜು ರೇವಣಕರ್, ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ರವಿ ಕೋಟೆನ್ನವರ, ನಗರಸಭೆ ಅಧ್ಯಕ್ಷೆ ಸವೀತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ, ಸದಸ್ಯರಾದ ರೇಖಾ ಕಲಬುರಗಿ, ಶಶಿಕಲಾ ಮಜ್ಜಗಿ, ಪ್ರೇಮಾ ಅಂಬಿಗೇರ,ಸರಸ್ವತಿ ಕುರಬರ, ಶಿವಲೀಲಾ ಪಟ್ಟಣಶೆಟ್ಟಿ, ನಗರ ಮಂಡಲ ಅಧ್ಯಕ್ಷ ಬವರಾಜ ಹುನಗುಂದ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೋಣ್ಣೂರ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಸಂಗಯ್ಯ ಸರಗಣಾಚಾರಿ. ಸುರೇಶ ಮಜ್ಜಗಿ, ರಾಜು ಗಾಣಿಗೇರ ಸೇರಿದಂತೆ ಅನೇಕ ಜನ ಕಾರ್ಯಕರ್ತರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande