ಸಿಕ್ಕಿಂನಲ್ಲಿ ಭೂಕುಸಿತ ದುರಂತ : ಪಂಚಾಯತ್ ಅಧ್ಯಕ್ಷ ಸೇರಿ ಐವರ ಬಲಿ
ಗ್ಯಾಂಗ್ಟಾಕ್, 14 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಿಕ್ಕಿಂ ರಾಜ್ಯದಲ್ಲಿ ನಿರಂತರ ಮಳೆಯಿಂದ ಭೂಕುಸಿತದ ಆತಂಕ ಹೆಚ್ಚುತ್ತಿರುವ ನಡುವೆ, ಗೇಜಿಂಗ್ ಜಿಲ್ಲೆಯ 19-ಸರ್ಡಾಂಗ್ ಲುಂಗ್ಜಿಕ್ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇನ್ ಗುರುಂಗ್ ಭೂಕುಸಿತಕ್ಕೆ ಬಲಿಯಾಗಿದ್ದಾರೆ. ಶನಿವಾರ ತಡರಾತ್ರಿಯವರೆಗೂ ಮುಂದುವರ
ಸಿಕ್ಕಿಂನಲ್ಲಿ ಭೂಕುಸಿತ ದುರಂತ : ಪಂಚಾಯತ್ ಅಧ್ಯಕ್ಷ ಸೇರಿ ಐವರ ಬಲಿ


ಗ್ಯಾಂಗ್ಟಾಕ್, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಿಕ್ಕಿಂ ರಾಜ್ಯದಲ್ಲಿ ನಿರಂತರ ಮಳೆಯಿಂದ ಭೂಕುಸಿತದ ಆತಂಕ ಹೆಚ್ಚುತ್ತಿರುವ ನಡುವೆ, ಗೇಜಿಂಗ್ ಜಿಲ್ಲೆಯ 19-ಸರ್ಡಾಂಗ್ ಲುಂಗ್ಜಿಕ್ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇನ್ ಗುರುಂಗ್ ಭೂಕುಸಿತಕ್ಕೆ ಬಲಿಯಾಗಿದ್ದಾರೆ.

ಶನಿವಾರ ತಡರಾತ್ರಿಯವರೆಗೂ ಮುಂದುವರಿದ ರಕ್ಷಣಾ ಕಾರ್ಯಾಚರಣೆಯ ಬಳಿಕ ಅವರ ದೇಹವನ್ನು ಹೊರತೆಗೆಯಲಾಗಿದೆ.

ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಪಂಚಾಯತ್ ಅಧ್ಯಕ್ಷರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ರಾಜೇನ್ ಗುರುಂಗ್ ಅವರ ಸಮುದಾಯ ಸೇವೆ ಮತ್ತು ಜನಪರ ಕೊಡುಗೆಯನ್ನು ಸದಾ ಗೌರವದಿಂದ ಸ್ಮರಿಸಲಾಗುವುದು” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಪಶ್ಚಿಮ ಸಿಕ್ಕಿಂನಲ್ಲಿ ಮಳೆಯ ತೀವ್ರತೆಯಿಂದಾಗಿ ಹಲವು ಕಡೆ ಸಂಭವಿಸಿದ ಭೂಕುಸಿತಕ್ಕೆ ಐವರು ಮೃತಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande