ಕೋಲಾರ, ೦೯ ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೇವಲ ಹಣ ಮಾಡುವ ಮನಸ್ಸಿರುವರು ಹುಡುಗಾಟಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬರಬೇಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಬದ್ದತೆಯಿಂದ ಬನ್ನಿ, ಗಂಭೀರತೆ ಇರಲಿ, ಬದುಕು,ಕನಸುಗಳನ್ನು ಅಡವಿಟ್ಟು ಗೆಲ್ಲುವ ಸಂಕಲ್ಪದಿಂದಿಗೆ ಅಧ್ಯಯನ ಮಾಡಿ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕರೆ ನೀಡಿದರು.
ಕೋಲಾರ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಶ್ರೀ ದ್ಯಾವರಪ್ಪ ರತ್ನಮ್ಮ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ಹಾಗೂ ಜಿಲ್ಲಾಡಳಿತ, ಡಿ.ಎಂ.ಆರ್. ಸ್ವರ್ಧಾತ್ಮಕ ಪರೀಕ್ಷಾ ತರಭೇತಿ ಸಂಸ್ಥೆಯಿಂದ ಆಯೋಜಿಸಿದ್ದ ಉನ್ನತ ಸ್ವರ್ಧಾತ್ಮಕ ಪರೀಕ್ಷೆಯ ತರಭೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಡಿಸಿಪಿ ದೇವರಾಜ್ ಅವರು, ತಮ್ಮ ಊರು, ಯುವಕರಿಗಾಗಿ ಏನಾದರು ಮಾಡಬೇಕು ಎಂದು ಸಂಸ್ಥೆ ಕಟ್ಟಿ ಆದರ್ಶಪ್ರಾಯರಾಗಿದ್ದಾರೆ, ತಮ್ಮ ಜನ್ಮ ಭೂಮಿಯ ಋಣ ತೀರಿಸಿಕೊಳ್ಳಲು ತಮ್ಮ ತಂದೆ ತಾಯಿಯ ಹೆಸರಿನಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿ ಅನೇಕ ಪ್ರತಿಭೆಗಳನ್ನು ನಮ್ಮ ದೇಶಕ್ಕೆ ನಮ್ಮ ರಾಜ್ಯಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಅಭಿನಂದನೀಯ ಎಂದರು.
ಇಂತಹ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ಪಡೆಯುವ ನೀವೆಲ್ಲಾ ನಿಜಕ್ಕೂ ಅಧೃಷ್ಟವಂತರು ಎಂದ ಅವರು ಉನ್ನತ ಪರೀಕ್ಷೆಗಳಲ್ಲಿ ಗೆದ್ದವರು ಹೆಚ್ಚು ಕೋಲಾರದವರು ಈ ದೇಶದ ಆಸ್ತಿಗಳಾಗಿ ಹೊರ ಹೊಮ್ಮಿದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿ ಆದರೆ ಏನೋ ಮಾಡಬಹುದು ಅಂದಕೊಂಡಿದ್ದಾರೆ. ಆಸಕ್ತಿಯನ್ನು ಈಡೇರಿಸಿಕೊಳ್ಳಲು ಕ್ರಿಯಾಯೋಜನೆ ತಯಾರಿಸಿಕೊಳ್ಳಬೇಕು. ಆಸಕ್ತಿ ಜತೆಗೆ ಇಚ್ಛಾಶಕ್ತಿಯಿರಬೇಕು, ಕೌಶಲ್ಯ, ಗುಣಮಟ್ಟವು ತಯಾರಿಗೆ ಆಸಕ್ತಿ ತೋರುತ್ತದೆ. ಇದ್ಯಾವುದನ್ನು ಪದವಿ ಹಂತದಲ್ಲಿ ಕಾಣಲು ಸಾಧ್ಯವಿಲ್ಲ, ಇಂತಹ ಪರೀಕ್ಷೆಗಳನ್ನು ಬರೆಯುವಾಗ ಹಿಂಜರಿಕೆಬೇಕಿಲ್ಲ ಎಂದು ಕಿವಿಮಾತು ಹೇಳಿದರು.
ಅಧಿಕಾರ ಸಿಕ್ಕ ಮೇಲೆ ಅಹಂಕಾರದಿಂದ ವರ್ತಿಸುವುದು ಬೇಡ, ದುಡ್ಡು ಸಿಗುತ್ತದೆ ಎಂಬ ಉದ್ದೇಶದಿಂದ ಯುಪಿಎಸ್ಸಿ ಪರೀಕ್ಷೆ ಬರೆಯಬೇಡಿ, ಹಣಕ್ಕಾಗಿ ಸಾವಿರಾರು ಅವಕಾಶಗಳು ಇವೆ. ಭ್ರಮೆಗಳನ್ನು ಬಿಟ್ಟು ಪರೀಕ್ಷೆಗಳನ್ನು ಬರೆಯಿರಿ ಎಂದ ಅವರು, ಯುವಜನಾಂಗ ಬದುಕು ರೂಪಿಸಿಕೊಳ್ಳುವಾಗ ಎಡವುತ್ತಿದ್ದಾರೆ ಎಂದು ವಿಷಾದಿಸಿದರು.
ಬೆಂಗಳೂರಿನ ಪೂರ್ವ ಡಿಸಿಪಿ ಡಿ.ದೇವರಾಜ್ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸವನ್ನು ಸೃಷ್ಠಿಸಲಾರರು, ಯಾವೂದೇ ಸಾಧನೆ ಮಾಡಲು ಸಾಧ್ಯವಾಗದು. ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೇ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಬಡತನದಿಂದಾಗಿ ಉನ್ನತ ಮಟ್ಟದ ಸ್ವರ್ಧಾ ತ್ಮಕ ಪರೀಕ್ಷೆಗಳನ್ನು ಪಡೆಯಲು ಅನೇಕ ಪ್ರತಿಭೆಗಳಗೆ ತರಬೇತಿ ಪಡೆಯಲು ಬೆಂಗಳೂರು ದುಬಾರಿ ಯಾಗಿದ್ದು, ಎಲೆಮರೆಯ ಕಾಯಂತೆ ಬೆಳಕಿಗೆ ಬಾರದೆ ಇರುವವರಿಗೆ ಅತಿಕಡಿಮೆ ವೆಚ್ಚದಲ್ಲಿ ಜಿಲ್ಲಾ ಕೇಂದ್ರದಲ್ಲಿ ತರಭೇತಿ ನೀಡುವ ಮೂಲಕ ಪ್ರತಿಭೆ ಗಳನ್ನು ಬೆಳಕಿಗೆ ತರುವ ದಿಸೆಯಲ್ಲಿ ಡಿಎಂಆರ್ ಎಜುಕೇಷನ್ ಫೌಂಡೇಷನ್ ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ಸದ್ಬಳಕೆ ಮಾಡಿ ಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಮ್ಮ ಸಂಸ್ಥೆಯಲ್ಲಿ ತರಭೇತಿ ಪಡೆದವರು ಕೆ.ಎ.ಎಸ್. ಐ.ಆರ್.ಎಸ್. ಪರೀಕ್ಷೆಗಳನ್ನು ಬರೆದು ಡಿ.ಸಿ. ಎ.ಸಿ. ತಹಸೀಲ್ದಾರ್ ಸೇರಿದಂತೆ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಪೊಲೀಸ್ ಇಲಾಖೆಯ ಎಸ್.ಐ.ಗೆ ಆಯ್ಕೆಯಾಗಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತಿದೆ.
ಇದೇ ಸಂದರ್ಭಧಲ್ಲಿ ತಮ್ಮ ಗುರುಗಳಾದ ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ರಾವ್ ಅವರ ಶಿಷ್ಯರು ಈ ರಾಷ್ಟ್ರದ ಪ್ರತಿಯೊಂದು ರಾಜ್ಯದಲ್ಲಿ ಇದ್ದಾರೆ.ಅವರ ಬಳಿ ತರಭೇತಿ ಪಡೆದ ತಾನು ಇಂದು ನಿಮ್ಮ ಮುಂದೆ ಡಿ.ಸಿ.ಪಿ. ಆಗಿ ನಿಲ್ಲಲು ಸಾಧ್ಯವಾಯಿತು. ಅವರು ಓರ್ವ ಅಧಿಕಾರಿಯಾಗಿ ಅಲ್ಲ ಅಧ್ಯಯನ ಶೀಲರು, ಚಿಂತಕರು ಆಗಿದ್ದು ಬಹುಮುಖದ ಪ್ರತಿಭೆಗಳನ್ನು ಬೆಳೆಸಿದಂತಹ ಗುರುಗಳಾಗಿದ್ದಾರೆ, ಅವರ ಉಪನ್ಯಾಸ ಕೇಳಲು ನೀವೆಲ್ಲಾ ಅದೃಷ್ಟ ಮಾಡಿರುವಿರಿ ಎಂದು ಶ್ಲಾಘಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಮಾತನಾಡಿ, ಡಿಎಂಆರ್ ಸಂಸ್ಥೆ ಜಿಲ್ಲೆಯ ಯುವಕರ ಪಾಲಿಗೆ ಅನುಭವಮಂಟಪದಂತಾಗಲಿ, ಸಮಾಜವನ್ನು ಹೊಸ ದಿಕ್ಕಿಗೆ ಕರೆದೊಯ್ಯುವ ಡಿಸಿಪಿ ದೇವರಾಜ್ ಅವರ ಪ್ರಯತ್ನಕ್ಕೆ ಕೈಜೋಡಿಸಿ, ಸ್ಪರ್ಧಾತ್ಮಕ ಪರೀಕ್ಷೆ ಗೆದ್ದು ಬನ್ನಿ ಎಂದರು.
ಪರೀಕ್ಷೆಯು ಟಿ-೨೦ ಪಂದ್ಯವಲ್ಲ, ಟೆಸ್ಟ್ ಪಂದ್ಯಾವಳಿ ಇದ್ದ ಹಾಗೆ. ಸಿದ್ದತೆಯೂ ಸೆಸ್ಡ್ ಇದ್ದಹಾಗೆ. ಇದಕ್ಕೆ ಸಮಯ ಪಾಲನೆ ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು. ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಗುರಿ ಸಾಧನೆಗೆ ಮುಂದಾಗಬೇಕು. ಪ್ರತಿ ದಿನ ೮ ರಿಂದ ೧೦ ತಾಸು ಓದಿದಬೇಕು. ಪರೀಕ್ಷೆಯ ಹಿಂದಿನ ರಾತ್ರಿ ಓದಿದ ಮಾತ್ರಕ್ಕೆ ಸೂಪರ್ ಸ್ಟಾರ್ ಆಗಲು ಸಾಧ್ಯವಿಲ್ಲ. ದಿನ ಪತ್ರಿಕೆ ಯಲ್ಲಿ ಸಿಗುವ ಜ್ಞಾನ ಯಾವುದೇ ಪುಸ್ತಕದಲ್ಲಿ ಸಿಗಲು ಸಾಧ್ಯವಿಲ್ಲ. ವಿದೇಶ, ದೇಶ ವಾಣಿಜ್ಯ, ಕ್ರೀಡೆ,ಹೀಗೆ ಹಲವು ವಿಚಾರಗಳ ಜ್ಞಾನ ಸಿಗುತ್ತದೆ. ಸಂಪಾದಕೀಯ ಓದುವುದರಿಂದ ಸಿಗುವ ಜ್ಞಾನ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.
ಪೋಷಕರು ತಮ್ಮ ಮಕ್ಕಳಿಗೆ ಪುಸ್ತಕಗಳನ್ನು ಕೊಡಿಸುವುದರಿಂದ ಕೋಟೆ ಬದಲು ಜ್ಞಾನದ ಕೋಟೆ ಕಟ್ಡಿಕೊಡಬೇಕು ಜ್ಞಾನದ ಕೋಟೆಯನ್ನು ಯಾರಿಂದಲೂ ಬೇಧಿಸಲು ಸಾಧ್ಯವಿಲ್ಲ, ತಂದೆ ತಾಯಿ ಬಗ್ಗೆ ಕಾಳಜಿವಹಿಸಬೇಕು. ತಂದೆ ತಾಯಿ ಮುಂದೆ ಯಾರೇನು ಅಲ್ಲ. ಒಂಬತ್ತು ತಿಂಗಳು ಹೊತ್ತು ಜನ್ಮ ಕೊಟ್ಟಿದ್ದಾರೆ. ಕೆಟ್ಟದನ್ನು ಬಯಸುವುದಿಲ್ಲ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ರಾವ್, ಕೋಲಾರದ ಜನತೆಗಾಗಿ ಡಿಎಂಆರ್ ಸಂಸ್ಥೆ ಕಟ್ಟಿದ ಡಿಸಿಪಿ ದೇವರಾಜ್ ಅವರ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭಧಲ್ಲಿ ಐಎಎಸ್ ಪರೀಕ್ಷೆಯಲ್ಲಿ ೫೨೨ ರ್ಯಾಂಕ್ ಪಡೆದ ಮಧು, ಎಸ್ಐ ಹುದ್ದೆಗೆ ಆಯ್ಕೆಯಾದ ಜಯಸೂರ್ಯ, ಕಿರಣ್ ಹಾಗೂ ನಗರದ ಸರ್ಕಾರಿ ಕಿರಿಯರ ಬಾಲಕಿಯರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಕೆ.ವಿ.ಶಂಕರಪ್ಪ, ರಾಜ್ಯ ಪತ್ರಕರ್ತರ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು, ಸಹ್ಯಾದ್ರಿ ಕಾಲೇಜು ಅಧ್ಯಕ್ಷ ಉದಯ ಕುಮಾರ್, ರವಿ ಕಾಲೇಜಿನ ಸಂಸ್ಥಾಪಕ ಮೂರಂಡಹಳ್ಳಿ ಡಾ.ಇ. ಗೋಪಾಲಪ್ಪ, ಡಾ.ಅರವಿಂದ್, ಡಾ. ಶಂಕರ್, ಡಾ.ಬೀರೇಗೌಡ, ಆರ್.ವಿ. ಕಾಲೇಜಿನ ವೇದಾ, ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪರಮೇಶ್ವರ್, ಡಾ.ಅರಿವು ಶಿವಪ್ಪ,ಪಂಡಿತ್ ಮುನಿವೆಂಕಟಪ್ಪ, ಮುಂತಾದವರು ಉಪಸ್ಥಿತರಿದ್ದರು.
ಚಿತ್ರ : ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಶ್ರೀ ದ್ಯಾವರಪ್ಪ ರತ್ನಮ್ಮ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ಆಯೋಜಿಸಿದ್ದ ಉನ್ನತ ಸ್ವರ್ಧಾತ್ಮಕ ಪರೀಕ್ಷೆಯ ಕಾರ್ಯಾಗಾರದಲ್ಲಿ ಐಎಎಸ್ ಪರೀಕ್ಷೆಯಲ್ಲಿ ೫೨೨ ರ್ಯಾಂಕ್ ಪಡೆದ ಮಧು, ಎಸ್ಐ ಹುದ್ದೆಗೆ ಆಯ್ಕೆಯಾದ ಜಯಸೂರ್ಯ, ಕಿರಣ್ ಹಾಗೂ ನಗರದ ಸರ್ಕಾರಿ ಕಿರಿಯರ ಬಾಲಕಿಯರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್