ಗೋಡೆಹಾಳ್ ಕ್ರಾಸ್‍ನಲ್ಲಿ ಲಾರಿ - ಆಟೋ ಡಿಕ್ಕಿ ; ಆಟೋ ಚಾಲಕ ಸಾವು, ಮತ್ತೋರ್ವ ಗಂಭೀರ
ಬಳ್ಳಾರಿ, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಗರಿ ಸೇತುವೆಯ ಬಳಿಯ ಗೋಡೆಹಾಳ್ ಕ್ರಾಸ್ ಸಮೀಪದಲ್ಲಿ ಸೋಮವಾರ ರಾತ್ರಿ ಲಾರಿ ಮತ್ತು ಆಟೋ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿದ್ದು ಆಟೋದಲ್ಲಿದ್ದ ಆರು ಪ್ರಯಾಣಿಕರು ಗಾಯಗೊಂಡಿದ್ದು, ಒಬ್ಬ ಪ್ರಯಾಣಿ
ಗೋಡೆಹಾಳ್ ಕ್ರಾಸ್‍ನಲ್ಲಿ ಲಾರಿ - ಆಟೋ ಡಿಕ್ಕಿ ; ಆಟೋ ಚಾಲಕ ಸಾವು, ಮತ್ತೋರ್ವ ಗಂಭೀರ


ಬಳ್ಳಾರಿ, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಗರಿ ಸೇತುವೆಯ ಬಳಿಯ ಗೋಡೆಹಾಳ್ ಕ್ರಾಸ್ ಸಮೀಪದಲ್ಲಿ ಸೋಮವಾರ ರಾತ್ರಿ ಲಾರಿ ಮತ್ತು ಆಟೋ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿದ್ದು ಆಟೋದಲ್ಲಿದ್ದ ಆರು ಪ್ರಯಾಣಿಕರು ಗಾಯಗೊಂಡಿದ್ದು, ಒಬ್ಬ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.

ಮೃತ ಆಟೋ ಚಾಲಕ ಪವನ್ (25) ತೀವ್ರವಾಗಿ ಗಾಯಗೊಂಡಿದ್ದು ಬಿಎಂಆರ್‍ಎಚ್‍ಗೆ ರವಾನೆ ಮಾಡಿ, ಚಿಕಿತ್ಸೆ ಫಲ ನೀಢದೇ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆಟೋದಲ್ಲಿದ್ದ ಆರು ಪ್ರಯಾಣಿಕರ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಗಾಯಾಳುಗಳು ಎಲ್ಲರೂ ಶಿರಡಿಗೆ ಪ್ರಯಾಣಿಸಲು ಆಟೋದಲ್ಲಿ ಬಳ್ಳಾರಿಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಿ.ಡಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande