ಕೋಲಾರ, ೩೧ ಆಗಸ್ಟ್ (ಹಿ.ಸ) :
ಆ್ಯಂಕರ್ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಕೇಳಿದಷ್ಟು ಅನುದಾನ ತಂದು ಅಭಿವೃದ್ಧಿ ಮಾಡಕ್ಕೆ ಸಿದ್ದವಿದ್ದು ಅವಕಾಶಗಳು ಇವೆ ಯಾರೋ ಮಾತಾಡರೋಕಿ ಅಭಿವೃದ್ಧಿ ಮೂಲಕವೇ ಉತ್ತರವಾಗಲಿ ಇಲ್ಲ ಎಂದರೆ ಯಾರು ತಪ್ಪು ಮಾಡಿದ್ದಾರೆ ಅವರನ್ನು ಸೀತಿ ಬೈರೇಶ್ವರ ಸ್ವಾಮಿಯೇ ನೋಡಿಕೊಳ್ಳಲಿ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಚಂಜಿಮಲೆ ಗ್ರಾಮದಿಂದ ಕಡಗಟ್ಟೂರು, ಸೀತಿಹೊಸೂರು ಮತ್ತು ಬೈರಂಡಹಳ್ಳಿವರೆಗೆ ೫ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ, ಬೈರಂಡಹಳ್ಳಿ ಕೆರೆ ಅಭಿವೃದ್ಧಿಗೆ ೩.೫, ಕಡಗಟ್ಟೂರು ಗ್ರಾಮದಿಂದ ಮಠಪುರ ಕ್ಯಾಲನೂರು ತಿಪ್ಪೇನಹಳ್ಳಿ ರಸ್ತೆ ೨ ಕೋಟಿ ಎಂಎಲ್ಸಿ ಅನಿಲ್ ಕುಮಾರ್ ಅನುದಾನದಲ್ಲಿ ಸೀತಿ ಬೆಟ್ಟದಲ್ಲಿ ಸೀತಿ ದೇವಾಲಯದ ಬಳಿ ಊಟದ ವ್ಯವಸ್ಥೆಗೆ ಡೈನಿಂಗ್ ಹಾಲ್ ನಿರ್ಮಾಣಕ್ಕೆ ೯೫ ಲಕ್ಷ, ಮಹಿಳೆಯರ ವಿಶ್ರಾಂತಿ ಕೊಠಡಿಗೆ ೨೫ ಲಕ್ಷ ಹಾಗೂ ಮುಡಿ ಕಟ್ಟು ನಿರ್ಮಾಣಕ್ಕೆ ೧೫ ಲಕ್ಷ ಒಟ್ಟು ೧೧.೫೦ ಕೋಟಿ ಮತ್ತು ಸೀತಿ ಗ್ರಾಮ ಪಂಚಾಯಿತಿ ವತಿಯಿಂದ ದೇವಾಲಯದ ಬಳಿ ನಿರ್ಮಿಸಿರುವ ೨೩ ಅಂಗಡಿ ಮಳಿಗೆಗಳ ಉದ್ಘಾಟನಾ ಕಾರ್ಯಾಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸೀತಿ ಬೈರೇಶ್ವರ ದೇವಾಲಯ ಇತಿಹಾಸ ಪ್ರಸಿದ್ದ ವಾಗಿದ್ದು ಮೂರು ರಾಜ್ಯಗಳಿಂದ ಭಕ್ತಾದಿಗಳು ಇಲ್ಲಿಗೆ ಬರತ್ತಾರೆ ಇಂತಹ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಸೀತಿ ಗ್ರಾಮ ಪಂಚಾಯತಿಯು ಮಾದರಿ ಪಂಚಾಯತಿಗಳಲ್ಲಿ ಒಂದಾಗಿದೆ ಯಾವುದೇ ಅನುದಾನವಿಲ್ಲದೇ ೨೩ ಅಂಗಡಿ ಮಳಿಗೆಗಳು ಕಟ್ಟಲಾಗುತ್ತಿದೆ ನನ್ನ ಅನುದಾನದಲ್ಲಿ ೧೦ ಲಕ್ಷ ನೀಡಲಾಗುತ್ತದೆ ಮುಂದೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಎಂಎಲ್ಸಿ ನಸೀರ್ ಅಹಮದ್ ಅವರನ್ನು ಕರೆದುಕೊಂಡು ಬಂದು ಅವರ ಅನುದಾನವನ್ನು ನೀಡಲಾಗುತ್ತದೆ ವಸತಿ ನಿಲಯವನ್ನು ಮಾಡಿದರೆ ಅನುಕೂಲವಾಗುತ್ತೆ ಅಭಿವೃದ್ಧಿ ವಿಚಾರದಲ್ಲಿ ನಿಮ್ಮೊಂದಿಗೆ ಸದಾ ಇರತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಮಾತನಾಡಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಯಾರು ಕೂಡು ಸುಮ್ಮನೆ ಬಂದು ಪೂಜೆ ಮಾಡಲ್ಲ ಇಲಾಖೆಗಳಿಂದ ಟೆಂಡರ್ ಆಗಿ ಅನುಮೋದನೆ ಸಿಕ್ಕಿದ ಮೇಲೆಯೇ ಗುದ್ದಲಿ ಪೂಜೆಗೆ ಬಂದಿರೋದು ಪ್ರಶ್ನೆ ಮಾಡಲಿ ಅದನ್ನು ಬಿಟ್ಟು ದೌರ್ಜನ್ಯ ಮಾಡುವುದು ದಬ್ಬಾಳಿಕೆ ನಡೆಸಬಾರದು ಅಭಿವೃದ್ಧಿ ತೊಂದರೆ ಕೊಡಕ್ಕೆ ಅಂತ ಬಂದವರಿಗೆ ಅಭಿವೃದ್ಧಿ ಮೂಲಕವೇ ಉತ್ತರವಾಗಬೇಕು ಎಂದರು
ಕಾರ್ಯಕ್ರಮದಲ್ಲಿ ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸೀತಿ ಗ್ರಾಪಂ ಅಧ್ಯಕ್ಷೆ ಕವಿತ ಮುನಿರಾಜು, ಉಪಾಧ್ಯಕ್ಷೆ ಅನಿತಾ ಶ್ರೀನಿವಾಸ್, ತಾಪಂ ಇಒ ಮಂಜುನಾಥ್ ಎಇಇ ಮಂಜುನಾಥ್, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ವೀರೇಂದ್ರ ಪಾಟೀಲ್, ಅಂಕತಟ್ಟಿ ಬಾಬು, ಉರಟ ಅಗ್ರಹಾರ ಚೌಡರೆಡ್ಡಿ, ಸಕಲೇಶ್, ಕುಮಾರ್, ರಾಜಕುಮಾರ್, ಪೆರ್ಜೇನಹಳ್ಳಿ ನಾಗೇಶ್, ಬೈರಪ್ಪ, ಮುನಿರಾಜು ಮುಜರಾಯಿ ತಹಶಿಲ್ದಾರ್ ಶ್ರೀನಿವಾಸ್ ನಿರ್ಮಿತಿ ಕೇಂದ್ರದ ಅಶ್ವಿನ್ ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ವೇಮಗಲ್ ಬಳಿ ರಸ್ತೆ ಕಾಮಗಾರಿಗೆ ಶಾಸಕ ಕೊತ್ತೂರು ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್