ಆಂಧ್ರ ಪ್ರದೇಶದ ಗ್ರಾನೈಟ್ ಗಣಿಯಲ್ಲಿ ಭೀಕರ ಅವಘಡ : ಆರು ಕಾರ್ಮಿಕರು ಸಾವು
ಬಾಪಟ್ಲಾ, 03 ಆಗಸ್ಟ್ (ಹಿ.ಸ.) : ಆ್ಯಂಕರ್ : ಆಂಧ್ರ ಪ್ರದೇಶದ ಬಲ್ಲಿಕುರ್ವಾ ಗ್ರಾಮದ ಬಳಿಯ ಸತ್ಯಕೃಷ್ಣ ಗ್ರಾನೈಟ್ ಗಣಿಯಲ್ಲಿ ನಡೆದ ಭೀಕರ ಅವಘಡದಲ್ಲಿ ಆರು ಕಾರ್ಮಿಕರು ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ. ಗಣಿ ಕುಸಿತದಿಂದ ಬಂಡೆಗಳು ಬಿದ್ದು ಈ ದುರ್ಘಟನೆ ನಡೆದಿದೆ. ಅಪಘಾತದ ವೇಳೆ ಗಣಿಯಲ್ಲ
Six workers killed


ಬಾಪಟ್ಲಾ, 03 ಆಗಸ್ಟ್ (ಹಿ.ಸ.) :

ಆ್ಯಂಕರ್ : ಆಂಧ್ರ ಪ್ರದೇಶದ ಬಲ್ಲಿಕುರ್ವಾ ಗ್ರಾಮದ ಬಳಿಯ ಸತ್ಯಕೃಷ್ಣ ಗ್ರಾನೈಟ್ ಗಣಿಯಲ್ಲಿ ನಡೆದ ಭೀಕರ ಅವಘಡದಲ್ಲಿ ಆರು ಕಾರ್ಮಿಕರು ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ. ಗಣಿ ಕುಸಿತದಿಂದ ಬಂಡೆಗಳು ಬಿದ್ದು ಈ ದುರ್ಘಟನೆ ನಡೆದಿದೆ.

ಅಪಘಾತದ ವೇಳೆ ಗಣಿಯಲ್ಲಿ 16 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಹಠಾತ್ತನೆ ಬಂಡೆಗಳು ಕುಸಿದಿದ್ದರಿಂದ ಅನೇಕ ಮಂದಿ ಅದರಡಿ ಸಿಲುಕಿದ್ದರು. ಈಗಾಗಲೇ ನಾಲ್ಕು ಶವಗಳನ್ನು ಹೊರತೆಗೆದು ದೊರೆತಿದ್ದು, ಇನ್ನು ಎರಡು ಶವಗಳು ಬಂಡೆ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಗಾಯಾಳುಗಳನ್ನು ನರಸರಾವ್‌ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಮೃತ ಕಾರ್ಮಿಕರು ಓಡಿಶಾ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಕುರಿತು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಮತ್ತು ಸಂಪೂರ್ಣ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande