ಬಳ್ಳಾರಿ : ಬೇಡಿಕೆಗಳ ಈಡೇರಿಕೆಗಾಗಿ ಆಶಾಗಳ ಮೂರು ದಿನಗಳ `ಆಹೋರಾತ್ರಿ' ಪ್ರತಿಭಟನೆ
ಬಳ್ಳಾರಿ, 12 ಆಗಸ್ಟ್ (ಹಿ.ಸ.) : ಆ್ಯಂಕರ್ : ಆಶಾ ಕಾರ್ಯಕರ್ತೆಯರ ಗೌರವಧನ, ಸೇವಾ ಭದ್ರತೆ ಮತ್ತು ನಿವೃತ್ತಿ ನಂತರದ ಸೌಲಭ್ಯಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 10 ರಂದು ನೀಡಿದ್ದ `ಭರವಸೆಗಳನ್ನು'' ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಮಂಗಳ
ಬಳ್ಳಾರಿ : ಬೇಡಿಕೆಗಳ ಈಡೇರಿಕೆಗಾಗಿ ಆಶಾಗಳ ಮೂರು ದಿನಗಳ `ಆಹೋರಾತ್ರಿ' ಪ್ರತಿಭಟನೆ ಪ್ರಾರಂಭ


ಬಳ್ಳಾರಿ : ಬೇಡಿಕೆಗಳ ಈಡೇರಿಕೆಗಾಗಿ ಆಶಾಗಳ ಮೂರು ದಿನಗಳ `ಆಹೋರಾತ್ರಿ' ಪ್ರತಿಭಟನೆ ಪ್ರಾರಂಭ


ಬಳ್ಳಾರಿ : ಬೇಡಿಕೆಗಳ ಈಡೇರಿಕೆಗಾಗಿ ಆಶಾಗಳ ಮೂರು ದಿನಗಳ `ಆಹೋರಾತ್ರಿ' ಪ್ರತಿಭಟನೆ ಪ್ರಾರಂಭ


ಬಳ್ಳಾರಿ, 12 ಆಗಸ್ಟ್ (ಹಿ.ಸ.) :

ಆ್ಯಂಕರ್ : ಆಶಾ ಕಾರ್ಯಕರ್ತೆಯರ ಗೌರವಧನ, ಸೇವಾ ಭದ್ರತೆ ಮತ್ತು ನಿವೃತ್ತಿ ನಂತರದ ಸೌಲಭ್ಯಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 10 ರಂದು ನೀಡಿದ್ದ `ಭರವಸೆಗಳನ್ನು' ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಮಂಗಳವಾರದಿಂದ ಮೂರು ದಿಗನಳ ಕಾಲ `ಆಹೋರಾತ್ರಿ' ಪ್ರತಿಭಟನೆಯನ್ನು ಪ್ರಾರಂಭಿಸಿದೆ.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ಪ್ರತಿಭಟನೆಯ ನೇತೃತ್ವವಹಿಸಿ, ಆಶಾಗಳಲ್ಲಿಯ ಸುಗಮಕಾರರನ್ನು ಏಕಾಏಕಿ ವಜಾ ಮಾಡಿರುವುದು ಮಹಿಳಾ ವಿರೋಧಿ ನಿಲುವಾಗಿದೆ. ಅಲ್ಲದೇ, ಆಶಾ ಕಾರ್ಯಕರ್ತೆರಿಗೆ ಗೌರವ ಧನ ಹೆಚ್ಚಳ ಕುರಿತು ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂದರು.

60 ವರ್ಷ ವಯಸ್ಸು ಪೂರ್ಣಗೊಳಿಸಿರುವ ಆಶಾ ಕಾರ್ಯಕರ್ತೆಯರನ್ನು ಯಾವುದೇ ಪರಿಹಾರಗಳನ್ನು ನೀಡದೇ ನಿವೃತ್ತಿಗೆ ಒಳಪಡಿಸುವುದು ಸರಿಯಲ್ಲ. ಆಶಾಗಳ ಸೇವೆಯ ಮೌಲ್ಯಮಾಪನ, ಇನ್ನಿತರೆ ವಿಚಾರಗಳಿಂದ ಆಶಾಗಳ ಸೇವೆಯನ್ನು ಅವಮಾನಿಸುವ ಕೆಲಸ ಸರ್ಕಾರದಿಂದ ನಡೆದಿದೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನಡೆಯುತ್ತಿರುವ `ಆಹೋರಾತ್ರಿ' ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲೆಯ ನೂರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande