ನವದೆಹಲಿ, 22 ಜುಲೈ (ಹಿ.ಸ.) :
ಆ್ಯಂಕರ್ : ಸಂಸತ್ತಿನ ಮಳೆಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಪ್ರತಿ ಪಕ್ಷಗಳು ತಮ್ಮ ಪ್ರಮುಖ ಬೇಡಿಕೆಗಳನ್ನು ನಿಗದಿಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹಾಜರಿದ್ದು ನೇರವಾಗಿ ಉತ್ತರಿಸಬೇಕು ಎಂದು ಒತ್ತಾಯಿಸಿವೆ.
ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಸಾಮಾಜಿಕ ಮಾಧ್ಯಮದ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಅವರ ಪ್ರಕಾರ, ಪ್ರತಿ ಪಕ್ಷಗಳ ನಾಯಕರ ಸಭೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆದಿದ್ದು, ಅಧಿವೇಶನದ ಸಮಯದಲ್ಲಿ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ಅಗತ್ಯವೆಂದು ಒಮ್ಮತ ವ್ಯಕ್ತವಾಗಿದೆ.
ಚರ್ಚೆಗೆ ಆಯ್ಕೆ ಮಾಡಲಾದ ಪ್ರಮುಖ ವಿಷಯಗಳು:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿ
ಆಪರೇಶನ್ ಸಿಂಧೂರ್ ಮತ್ತು ಅದರ ಸಂಬಂಧಿತ ವಿಚಾರಗಳು
ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾಸ್ಪದ ಹೇಳಿಕೆ
ಬಿಹಾರ ಎಸ್ಐಆರ್ ಪ್ರಕ್ರಿಯೆ
ಗಡಿ ನಿರ್ಣಯದ ಸ್ಥಿತಿ
ದಲಿತ, ಬುಡಕಟ್ಟು, ಹಿಂದುಳಿದ ವರ್ಗಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ
ಮಹಿಳೆಯರ ಮೇಲಿನ ಹಿಂಸೆ
ಎಐ 171 ವಿಮಾನ ಅಪಘಾತ
ಮಣಿಪುರದ ನಾಗರಿಕ ಅಶಾಂತಿ
ವೇಣುಗೋಪಾಲ್ ಅವರು, “ಈ ಎಲ್ಲ ವಿಷಯಗಳು ನೇರವಾಗಿ ಸಾಮಾನ್ಯ ಜನರ ಜೀವನದೊಂದಿಗೆ ಸಂಬಂಧಪಟ್ಟಿರುವುದರಿಂದ, ಸಂಸತ್ತಿನಲ್ಲಿ ಪ್ರಧಾನಿಯವರ ನೇತೃತ್ವದಲ್ಲಿ ಗಂಭೀರ ಚರ್ಚೆ ನಡೆಯಬೇಕು,” ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa