ಬಳ್ಳಾರಿ, 02 ಜುಲೈ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರಾಗಿ ನಿರ್ವಹಣಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ ಜಿ.ಪಿ. ದಿನೇಶ್ ಅವರು ನೇಮಕಗೊಂಡಿದ್ದು, ನಿಕಟಪೂರ್ವ ಕುಲಸಚಿವರಾಗಿದ್ದ ರುದ್ರೇಶ್ ಎಸ್.ಎನ್ ಅವರು ಬುಧವಾರ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಈವರೆಗೆ ಕುಲಸಚಿವರಾಗಿದ್ದ ರುದ್ರೇಶ್ ಎಸ್.ಎನ್ ಅವರು ವರ್ಗಾವಣೆ ಆಗಿರುವ ಕಾರಣ ಡಾ. ಜಿ.ಪಿ. ದಿನೇಶ್ ಹಂಗಾಮಿ ಕುಲಸಚಿವರಾಗಿ ನೇಮಕಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್