ಕಲಬುರಗಿ, 08 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರ ಅಮಾನತು ಖಂಡನೀಯವಾಗಿದ್ದು, ಇದು ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕೈಗೊಂಡಿರುವ ನಿರ್ಧಾರವಾಗಿದೆ ಎಂದು ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷರು ಹಾಗೂ ನ್ಯಾಯವಾದಿಗಳಾದ
ಯಲ್ಲಾಲಿಂಗ ದೊರೆ ಆರೋಪಿಸಿದರು.
ಈ ಕುರಿತು ರವಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಎಡಿಜಿಪಿ ಹುದ್ದೆ ಶ್ರೇಣಿಯ ಅಧಿಕಾರಿಯಾಗಿರುವುದರಿಂದ, ಯಾವುದೇ ಕ್ರಮ ಕೈಗೊಳ್ಳುವ ಮೊದಲು ಘಟನೆಯ ಕುರಿತು ಪ್ರಾಥಮಿಕ ತನಿಖೆ ನಡೆಸಬೇಕಿತ್ತು ಎಂದರು.
ಆದರೆ ಸರ್ಕಾರ, ಯಾವುದೇ ತನಿಖೆ ಇಲ್ಲದೆ, ಶಿಸ್ತಿನ ಸೂಚನೆ ಇಲ್ಲದೆ, ರಾಜಕೀಯ ಹಿತರಕ್ಷಣೆಗಾಗಿ, ತಕ್ಷಣ ಅವರನ್ನು ಅಮಾನತುಗೊಳಿಸಿರುವುದುವಿಷಾದಕರ ಸಂಗತಿ. ಬಿ. ದಯಾನಂದ ಅವರು ನಿಷ್ಠಾವಂತ, ಶಿಸ್ತಿನ ಸೇವೆ, ಮತ್ತು ಜನತೆಯ ವಿಶ್ವಾಸಕ್ಕೆ ಪಾತ್ರರಾದ ಅಧಿಕಾರಿ. ಅವರನ್ನು ನಿಷ್ಕ್ರಿಯಗೊಳಿಸಿ ಸರ್ಕಾರ ತನ್ನ ಹರಕೆ ನೆರವೇರಿಸಿಕೊಂಡಂತಾಗಿದೆ ಎಂದರು.
ಇಂತಹ ನಾಚಿಕೆಗೆಡುಕಟ್ಟದ ವರ್ತನೆ ಅಧಿಕಾರಿಗಳ ವಿರುದ್ಧ ದರ್ಪ ತೋರುವ ಉದಾಹರಣೆಯಾಗಿದ್ದು, ಈ ದೇಶದಲ್ಲಿ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೂಲಮೂಲ್ಯಗಳ ವಿರುದ್ಧ ನಡೆಯುವ ಹಿಂಸೆಗಳಂತಿದೆ. ಪದೇಪದೇ ವಾಲ್ಮೀಕಿ ಸಮುದಾಯದ ಅಧಿಕಾರಿಗಳ ವಿರುದ್ಧ ತೋರಲಾಗುತ್ತಿರುವ ದಬ್ಬಾಳಿಕೆ. ಇಂತಹ ಜಾತಿ ಆಧಾರಿತ ವಿಭಜನೆ ಮತ್ತು ಅನ್ಯಾಯ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ಸರ್ಕಾರವನ್ನು ಜನತೆ ತೀವ್ರವಾಗಿ ಪ್ರಶ್ನಿಸುವ ಕಾಲ ಹತ್ತಿರದಲ್ಲಿದೆ. ತಕ್ಷಣ ಈ ಅಮಾನತು ರದ್ದುಗೊಳಿಸಬೇಕು. ಇಲ್ಲದಿದ್ದರೆ, ಗೃಹ ಸಚಿವರು ಮತ್ತು ಮುಖ್ಯಮಂತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು ಜವಾಬ್ದಾರಿ ಮತ್ತು ನೈತಿಕತೆಗನುಗುಣವಾಗಿರುತ್ತದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Samarth biral