ಕಲಬುರಗಿ, 08 ಜೂನ್ (ಹಿ.ಸ.) :
ಆ್ಯಂಕರ್ : ಭೀಮಾ ನದಿಯಲ್ಲಿ ಈಜಾಡಲು ತೆರಳಿದ್ದ ಯುವಕ ನಾಪತ್ತೆಯಾದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಾಲೂಕಿನ ಸರಡಗಿ ಬ್ರೀಡ್ಜ್ ಬಳಿ ನಡೆದಿದೆ. ಮಹಾದೇವ್ (20) ನದಿ ಪಾಲಾದ ಯುವಕ.
ಕಲಬುರಗಿಯಿಂದ ಐದು ಜನ ಸ್ನೇಹಿತರು ತೆರಳಿದ್ದರು, ಈ ವೇಳೆ ಐದು ಜನ ನದಿಯಲ್ಲಿ ಈಜಾಡಲು ಹೋದಾಗ ಈಜು ಬಾರದೇ ಮಹಾದೇವ್ ನದಿಯಲ್ಲಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಅಗ್ನಿಶಾಮಕ ದಳದಿಂದ ಶೋಧಕಾರ್ಯ ಮುಂದುವರಿದಿದೆ. ಜೇವರ್ಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲ ಘಟನೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / Samarth biral