ದೇವರಿಗೆ ಏರಿಸಿದ ಹೂವುಗಳನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ...
ದೇವರಿಗೆ ಏರಿಸಿದ ಹೂವುಗಳನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಹರಿಯುವ ನೀರಿಗೆ ಬಿಸಾಡಿ ಧನ್ಯರಾಗುವ ಮಹಾ ಭಕ್ತರಿಗೆ
ದೇವರಿಗೆ ಏರಿಸಿದ ಹೂವುಗಳನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ...


1. ದೇವರಿಗೆ ಏರಿಸಿದ ಹೂವುಗಳನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಹರಿಯುವ ನೀರಿಗೆ ಬಿಸಾಡಿ ಧನ್ಯರಾಗುವ ಮಹಾ ಭಕ್ತರಿಗೆ......

2. ಅಂಗಡಿಯಲ್ಲಿ ಕೊಳ್ಳುವ ತಾಜಾ ಮಾವಿನಹಣ್ಣನ್ನು ಕಪ್ಪು ಕವರಿನಲ್ಲಿ ಸುತ್ತಿಕೊಂಡು ಕೊರೋನ ಹೆಣದಂತೆ ಮನೆಗೆ ತರುವ ಮಹಾ ಜ್ಞಾನಿಗಳಿಗೆ.....

3. ಶಾಸ್ತ್ರೋಕ್ತವಾಗಿ ಮದುವೆ ಮಾಡಿ ಸಾಂಪ್ರದಾಯಿಕವಾಗಿ ಊಟ ಬಡಿಸುವ ಬಾಳೆಲೆಯ ಪಕ್ಕ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಇಟ್ಟು, ಪ್ರತಿಷ್ಠೆ ಮೆರೆಯುವ ಆಡಂಬರದ ಮನಸ್ಸುಗಳಿಗೆ......

4. ಮನೆಯ ಮುಂದೆ ಯಾರೋ ನೆಟ್ಟ, ಗಿಡ ಮರವಾದಾಗ, ಉದುರಿದ ಎಲೆ ಕಸವೆಂದು ಸಬೂಬು ಕೊಟ್ಟು ಮರ ಕತ್ತರಿಸಿ, ಪಕ್ಕದ ಮನೆಯವರು ನೆಟ್ಟ ಮರದ ಕೆಳಗೆ ತಮ್ಮ ಕಾರನ್ನು ತಂದು ನಿಲ್ಲಿಸುವ ಸದ್ಗೃಹಸ್ಥ ಸ್ವಾರ್ಥ ಮನಸ್ಸುಗಳಿಗೆ......

05. ಮನೆಯಿಂದ ಕೈ ಬಿಸಿಕೊಂಡು ಹೋಗಿ ಮೂಲೆ ಅಂಗಡಿಯಿಂದ ಮಣ ಭಾರ ತರಕಾರಿಗಳನ್ನು ತುಂಬಿಸಿಕೊಂಡು, ಜಗ್ಗುವ ಪ್ಲಾಸ್ಟಿಕ್ ಕವರ್ ಗಳನ್ನು ಊರು ಗೆದ್ದ ಉತ್ಸಾಹದಲ್ಲಿ ತರುವ ಬೇಜವಾಬ್ದಾರಿ ಮನಸ್ಸುಗಳಿಗೆ.....

06. ಮನೆಯ ಅಡುಗೆ ಮನೆಯಲ್ಲಿ ಹುಟ್ಟುಹಾಕುವ ಹಣ್ಣು - ತರಕಾರಿಗಳ ಹಸಿ ಕಸವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿ ರಸ್ತೆಯ ಮೂಲೆಯಲ್ಲಿ ಬಿಸಾಡಿ ಹಸಿದ ದನಗಳು ಆ ಪ್ಲಾಸ್ಟಿಕ್ ಕವರನ್ನೇ ತಿನ್ನುವಂತೆ ಮಾಡುವ ವಿಕೃತ ಮನಸ್ಸುಗಳಿಗೆ.....

07. ಅಂಗಳ ಸಾರಿಸುವ ನೆಪದಲ್ಲಿ, ಗಾಡಿ ತೊಳೆಯುವ ಹುಚ್ಚಾಟದಲ್ಲಿ ರಸ್ತೆಯಲ್ಲೇ ಹೊಳೆ ಹರಿಸುವ ಬೇಜವಾಬ್ದಾರಿ ಮನಸ್ಸುಗಳಿಗೆ.....

08. ನೂರಾರು ವರ್ಷ ಬಾಳಿ ನೆರಳು ನೀಡಿದ ಮರಗಳನ್ನು ಬುಡ ಸಮೇತ ಸವರಿ ರಸ್ತೆ ಅಗಲ ಮಾಡುವುದೇ ಅಭಿವೃದ್ಧಿ ಎಂದು ನಂಬಿರುವ ಸರ್ಕಾರಿ ಮನಸ್ಸುಗಳಿಗೆ.

09.ವಿಹಾರಕೆಂದು ಪ್ರಕೃತಿಯ ಮಡಿಲಿಗೆ ಹೋಗಿ ಹೊಟ್ಟೆ ತುಂಬಾ ತಿಂದು ಕುಡಿದು, ಕಸ ಎಸೆದು ಬರುವ ತಿಪ್ಪೇ ಮನಸ್ಸುಗಳಿಗೆ......

10. ಎಂಟನೇ ಮಹಡಿಯಲ್ಲಿರುವ ಮನೆಯ ಕಿಟಕಿಯಲ್ಲಿ ಹಳೆಯ paint ಡಬ್ಬದಲ್ಲಿ ತುಳಸಿ ಗಿಡ ನೆಟ್ಟು ಕೈ ಮುಗಿಯುವ ನಿಸ್ಸಹಾಯಕ ಮನಸ್ಸುಗಳಿಗೆ.....

ಪ್ರಕೃತಿ ಪೂಜೆ ಕೂಡ ಒಂದು ಸಂಸ್ಕೃತಿ

ಪರಿಸರ ದಿನದ ಶುಭಾಶಯಗಳು

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande