ಬರೇಲಿ, 30 ಜೂನ್ (ಹಿ.ಸ.) :
ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉತ್ತರಪ್ರದೇಶದ ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ 11ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಪದವೀಧರರಿಗೆ ಪದಕಗಳನ್ನು ವಿತರಿಸಿದರು.
ಸಂಸ್ಥೆಯ 135 ವರ್ಷದ ಸಾಧನೆಗಳನ್ನು ಶ್ಲಾಘಿಸಿದ ಅವರು, “ಆರೈಕೆಗೆ ಬದಲಾಗಿ ತಡೆಗಟ್ಟುವಿಕೆಯೇ ಉತ್ತಮ” ಎಂಬ ಸಂದೇಶ ನೀಡಿದರು. ಅವರು ಪ್ರಾಣಿಗಳ ಮಹತ್ವ, ರಾಸಾಯನಿಕ ಔಷಧಿಗಳ ವಿರುದ್ಧದ ನಿಲುವು, ಹಾಗೂ ಯುವಕರಿಗೆ ಸ್ವ ಉದ್ಯಮ ಆರಂಭಿಸಲು ಪ್ರೋತ್ಸಾಹ ನೀಡಿದರು. ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa