2028 ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ : ಸಿದ್ದರಾಮಯ್ಯ
ಮಂಡ್ಯ, 30 ಜೂನ್ (ಹಿ.ಸ.) : ಆ್ಯಂಕರ್ : ನಮ್ಮ ಸರ್ಕಾರ ಬಿಳಲಿದೆ ಎಂದು ಸೋತ ಗಿರಾಕಿಗಳು ಸುಳ್ಳು ಹರಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಐದು ವರ್ಷ ಬಂಡೆಯಂತೆ ಸ್ಥಿರವಾಗಿರುತ್ತದೆ. 2028 ರಲ್ಲೂ ನಾವು ಮತದಾರರ ಆಶೀರ್ವಾದದಿಂದ ಮತ್ತೆ ಅಧಿಕಾರಕ್ಕೆ ಬರುತ್ತೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮ
CM


ಮಂಡ್ಯ, 30 ಜೂನ್ (ಹಿ.ಸ.) :

ಆ್ಯಂಕರ್ : ನಮ್ಮ ಸರ್ಕಾರ ಬಿಳಲಿದೆ ಎಂದು ಸೋತ ಗಿರಾಕಿಗಳು ಸುಳ್ಳು ಹರಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಐದು ವರ್ಷ ಬಂಡೆಯಂತೆ ಸ್ಥಿರವಾಗಿರುತ್ತದೆ. 2028 ರಲ್ಲೂ ನಾವು ಮತದಾರರ ಆಶೀರ್ವಾದದಿಂದ ಮತ್ತೆ ಅಧಿಕಾರಕ್ಕೆ ಬರುತ್ತೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದ ಅವರು, “ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಜನರನ್ನು ದಡ್ಡರೆಂದು ಭಾವಿಸಬಾರದು. ಸುಳ್ಳು ಹೇಳುವ ಚಾಳಿಯನ್ನು ನಿಲ್ಲಿಸಬೇಕು,” ಎಂದು ತೀವ್ರ ವಾಗ್ದಾಳಿ ನಡೆಸಿದ ಅವರು, “ಜೆಡಿಎಸ್‌ಗೆ ತಮ್ಮದೇ ಆದ ಶಕ್ತಿ ಇಲ್ಲ. ಇನ್ನೊಬ್ಬರ ಬೆನ್ನಿಗೆ ಕೈ ಹಾಕಿಯೇ ಅಧಿಕಾರಕ್ಕೆ ಬರಬೇಕಾಗುತ್ತದೆ” ಎಂದು ವ್ಯಂಗ್ಯವಾಡಿದರು.

ನೀರಾವರಿಗೆ ಐತಿಹಾಸಿಕ ಅನುದಾನ

ಸರ್ಕಾರವು ನೀರಾವರಿ ಅಭಿವೃದ್ದಿಗೆ ₹25,000 ಕೋಟಿ ರೂ. ನೀಡಿರುವುದನ್ನು ಮುಖ್ಯಮಂತ್ರಿ ಉಲ್ಲೇಖಿಸಿ. “ಈ ಮಟ್ಟದ ಅನುದಾನ ನೀಡಿರುವ ಸರ್ಕಾರ ಬೇರೊಂದು ಇದೆಯಾ?” ಎಂದು ಪ್ರಶ್ನಿಸಿದರು. ಜೊತೆಗೆ ಕೃಷಿ ಪಂಪ್ ಸೆಟ್ ಸಬ್ಸಿಡಿಗೆ ಮಾತ್ರವೇ ವರ್ಷಕ್ಕೆ ₹19,000 ಕೋಟಿ ಮೀಸಲಿಡಲಾಗಿದೆ ಎಂದು ವಿವರಿಸಿದರು.

ಕಾವೇರಿ ನಿಗಮಕ್ಕೆ ₹3000 ಕೋಟಿ

ಈ ಬಾರಿ ಕಾವೇರಿ ಅಭಿವೃದ್ಧಿ ನಿಗಮಕ್ಕೆ ₹3000 ಕೋಟಿ ಅನುದಾನ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. “ಪೂರ್ವ ಸರ್ಕಾರಗಳು ಇದಕ್ಕೆ ಹಣ ನೀಡಿಲ್ಲ. ಅವರ ಕಾಲದಲ್ಲಿ ಅಭಿವೃದ್ದಿಗೆ ಬೆಲೆ ಇರಲಿಲ್ಲ” ಎಂದು ಟೀಕಿಸಿದರು.

ಮಳೆ, ಬೆಳೆ, ಸುಭಿಕ್ಷ ರಾಜ್ಯಕ್ಕೆ ತಾಯಿ ಕಾವೇರಿಯ ಆಶೀರ್ವಾದ

2023-24 ರಲ್ಲಿ ಬರಗಾಲ ಅನುಭವಿಸಿದ್ದ ರಾಜ್ಯ, ಇದೀಗ ಎಲ್ಲ ಜಲಾಶಯಗಳು ಭರ್ತಿಯಾಗಿರುವುದು ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು. “ಕಾವೇರಿ ತಾಯಿ ಹಾಗೂ ಚಾಮುಂಡೇಶ್ವರಿಯ ಕೃಪೆಯಿಂದ ಈ ಸುಭಿಕ್ಷ. ಎಲ್ಲಾ ನಾಲೆಗಳಿಗೆ ತಕ್ಷಣದಿಂದ ನೀರು ಹರಿಸಲು ಅಧಿಕಾರಿಗಳಿಗೆ ನಾನು ವೇದಿಕೆಯಿಂದಲೇ ಆದೇಶಿಸಿದ್ದೇನೆ” ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande