ಹೊಸಪೇಟೆ, 03 ಜೂನ್ (ಹಿ.ಸ.) :
ಆ್ಯಂಕರ್ : ಡಿವಿಜನಲ್ ರಿಟೇಲ್ ಸೇಲ್ಸ್ ಹೆಡ್ ಇಂಡಿಯನ್ ಆಯಿಲ್ ಕಾಪೆರ್Çೀರೇಷನ್ ಲಿಮಿಟೆಡ್ ಬಳ್ಳಾರಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಹೋಬಳಿಯ ಪೃಥಶ್ವೇರ ಗ್ರಾಮದ ಸರ್ವೆ ನಂ.75/6 ರ ವಿಸ್ತೀರ್ಣ 0.63 ಎಕರೆ ಜಮೀನನಲ್ಲಿ 20 ಕೆಎಲ್ ಸಾಮಥ್ರ್ಯದ ಪೆಟ್ರೋಲಿಯಂ ಕ್ಲಾಸ್ ಎ ಮತ್ತು 20 ಕೆಎಲ್ ಸಾಮಥ್ರ್ಯದ ಪೆಟ್ರೋಲಿಯಂ ಕ್ಲಾಸ್ ಬಿ, ಒಟ್ಟು 40 ಕೆಎಲ್ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಸ್ಥಾಪನೆ ಮಾಡಲು ನಿರಾಪೇಕ್ಷಣ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.
ಆರ್.ವಿನಯ.ಬಿ.ರಾಜ್ ತಂದೆ ಬಸವರಾಜ, ಬಸವೇಶ್ವರ ನಗರ ಕೊಟ್ಟೂರು ತಾಲೂಕು ಇವರನ್ನು ಪ್ರಾಂಚೈಸಿಯನ್ನಾಗಿ ನೇಮಕ ಮಾಡಿದ್ದು, ಈ ಜಮೀನಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಲು ಸಾರ್ವಜನಿಕರಿಂದ ಅಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಹತ್ತು ದಿನದೊಳಗಾಗಿ ಯಾವುದೇ ಅಕ್ಷೇಪಣೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಇಮೇಲ್ ಐಡಿ : vijayanagaradc@gmail.com ಅಥವಾ ಕಾರ್ಯಾಲಯದ ಎಂಎಜಿ-2 ಶಾಖೆಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್