ಬಳ್ಳಾರಿ, 05 ಜೂನ್ (ಹಿ.ಸ.) :
ಆ್ಯಂಕರ್ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಜನತಾ ಬಜಾರ್ ಆವರಣದಲ್ಲಿ ನಿರ್ದೇಶಕರುಗಳು ಸಸಿಗಳನ್ನು ನೆಟ್ಟು, ನೀರುಣಿಸಿ ವಿಶ್ವ ಪರಿಸರ ದಿನಾಚರಣೆಯನ್ನು ಗುರುವಾರ ಆಚರಿಸಿದ್ದಾರೆ.
ಜನತಾ ಬಜಾರ್ ನ ಅಧ್ಯಕ್ಷ ಕೆ.ಎ. ವೇಮಣ್ಣ ಅವರು, ಪರಿಸರವನ್ನು ಸಂರಕ್ಷಿಸುವ ಮೂಲಕ ಶುದ್ಧವಾದ ಗಾಳಿ, ಕಾಲ ಕಾಲಕ್ಕೆ ಮಳೆ - ಉತ್ತಮವಾದ ಆರೋಗ್ಯ ಮತ್ತು ಪರಿಸರದಲ್ಲಿರುವ ಜೀವಿಗಳ ಸಂರಕ್ಷಣೆ ಆಗಲಿದೆ. ಕಾರಣ ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಜನತಾ ಬಜಾರ್ ನ ಪ್ರಧಾನ ವ್ಯವಸ್ಥಾಪಕ ಗ್ಯಾನಪ್ಪ ಮತ್ತು ನಿರ್ದೇಶಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್