ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣಾ ಕಾರ್ಯ ಆರಂಭ
ಶಿವಮೊಗ್ಗ, 03 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2025-26ನೇ ಶೈಕ್ಷಣಿಕ ಸಾಲಿನ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳ ಉಚಿತ ಮತ್ತು ರಿಯಾಯಿತಿ ಬಸ್ ಪಾಸ್ ವಿತರಣಾ ಕಾರ್ಯವನ್ನು ಜೂನ್ 2ರಿಂದ ಪ್ರಾರಂಭಿಸಿದೆ. ವಿದ್ಯಾರ್ಥಿಗಳು ಈ ಬಾರಿ ಸೇವಾಸಿಂಧು ಪೋರ್ಟಲ್‌ (https://s
ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣಾ ಕಾರ್ಯ ಆರಂಭ


ಶಿವಮೊಗ್ಗ, 03 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2025-26ನೇ ಶೈಕ್ಷಣಿಕ ಸಾಲಿನ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳ ಉಚಿತ ಮತ್ತು ರಿಯಾಯಿತಿ ಬಸ್ ಪಾಸ್ ವಿತರಣಾ ಕಾರ್ಯವನ್ನು ಜೂನ್ 2ರಿಂದ ಪ್ರಾರಂಭಿಸಿದೆ. ವಿದ್ಯಾರ್ಥಿಗಳು ಈ ಬಾರಿ ಸೇವಾಸಿಂಧು ಪೋರ್ಟಲ್‌ (https://sevasindhu.karnataka.gov.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಸರ್ಕಾರದ ಆದೇಶದಂತೆ ಈ ಪ್ರಕ್ರಿಯೆ ಸಂಪೂರ್ಣ ಗಣಕೀಕೃತವಾಗಿದ್ದು, ಯಾವುದೇ ಆನ್‌ಲೈನ್ ಅರ್ಜಿ ಶುಲ್ಕವಿಲ್ಲ. ಕರ್ನಾಟಕ-ಒನ್ ಅಥವಾ ಗ್ರಾಮ-ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ₹30 ಸೇವಾ ಶುಲ್ಕ ವಿಧಿಸಲಾಗಿದೆ.

'ಶಕ್ತಿ' ಯೋಜನೆಯಡಿ ರಾಜ್ಯದ ವಿದ್ಯಾರ್ಥಿನಿಯರು ಮತ್ತು ಲಿಂಗತ್ತ್ವ ಅಲ್ಪಸಂಖ್ಯಾತರು ರಾಜ್ಯದೊಳಗಿನ ಪ್ರಯಾಣಕ್ಕೆ ಉಚಿತ ಪಾಸ್ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande