ನಟ ನಾಗ ಚೈತನ್ಯ–ಸಮಂತಾ ವಿಚ್ಛೇದನದ ಹಿಂದೆ ಹಣಕಾಸು ವ್ಯವಹಾರವಿಲ್ಲ
ಬೆಂಗಳೂರು, 25 ಜೂನ್ (ಹಿ.ಸ.) : ಆ್ಯಂಕರ್ : ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ಅವರು ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದು, ಯಾವುದೇ ಹಣಕಾಸು ಪರಿಹಾರ ಅಥವಾ 200 ಕೋಟಿ ರೂಪಾಯಿ ಜೀವನಾಂಶ ನೀಡಿಲ್ಲ ಎಂಬುದಾಗಿ ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ. ನಾಗ ಚೈತನ್ಯ ಇತ್ತೀಚಿನ ಸಂದರ್ಶನವೊಂದರ
Film


ಬೆಂಗಳೂರು, 25 ಜೂನ್ (ಹಿ.ಸ.) :

ಆ್ಯಂಕರ್ : ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ಅವರು ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದು, ಯಾವುದೇ ಹಣಕಾಸು ಪರಿಹಾರ ಅಥವಾ 200 ಕೋಟಿ ರೂಪಾಯಿ ಜೀವನಾಂಶ ನೀಡಿಲ್ಲ ಎಂಬುದಾಗಿ ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.

ನಾಗ ಚೈತನ್ಯ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತ, ನಾವು ಗೌರವದಿಂದ ಬೇರ್ಪಟ್ಟೆವು. ಇಂದಿಗೂ ಪರಸ್ಪರ ಗೌರವವಿದೆ, ಎಂದಿದ್ದಾರೆ. ಸಮಂತಾ ಕೂಡಾ “ನಾನು ಯಾರಿಂದಲೂ ಒಂದು ಪೈಸೆಯನ್ನೂ ಪಡೆದುಕೊಂಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಚ್ಛೇದನದ ನಂತರ, ನಾಗ ಚೈತನ್ಯ ಸೋಭಿತಾ ಧುಲಿಪಾಲರನ್ನು ವಿವಾಹವಾಗಿದ್ದು, ಸಮಂತಾ ತಮ್ಮ ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande