ಒಳಮೀಸಲಾತಿ ಜಾರಿಗೆ ನಮ್ಮವರೇ ಅಡ್ಡಿ : ಆರೋಪ
ಬಳ್ಳಾರಿ, 23 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯ ವಿಳಂಬಕ್ಕೆ ಕಾಂಗ್ರೆಸ್ ಪಕ್ಷದಲ್ಲಿರುವ ಹೆಚ್.ಸಿ. ಮಹಾದೇವಪ್ಪ, ಆರ್.ಬಿ. ತಿಮ್ಮಾಪುರ, ಎಚ್. ಮುನಿಯಪ್ಪ, ಎಚ್. ಆಂಜನೇಯ ಸೇರಿ ಅನೇಕ ನಾಯಕರು ಕಾರಣರು ಎಂದು ಮೀಸಲಾತಿ ಹೋರಾಟ ಸಮಿತಿಯ ಭಾಸ್ಕರ್ ಪ್ರಸಾದ್ ಅವರು ತೀವ್ರ ಅಸಮಾಧ
ಒಳಮೀಸಲಾತಿ ಜಾರಿಗೆ ನಮ್ಮವರೇ ಅಡ್ಡಿ ; ಆರೋಪ


ಬಳ್ಳಾರಿ, 23 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯ ವಿಳಂಬಕ್ಕೆ ಕಾಂಗ್ರೆಸ್ ಪಕ್ಷದಲ್ಲಿರುವ ಹೆಚ್.ಸಿ. ಮಹಾದೇವಪ್ಪ, ಆರ್.ಬಿ. ತಿಮ್ಮಾಪುರ, ಎಚ್. ಮುನಿಯಪ್ಪ, ಎಚ್. ಆಂಜನೇಯ ಸೇರಿ ಅನೇಕ ನಾಯಕರು ಕಾರಣರು ಎಂದು ಮೀಸಲಾತಿ ಹೋರಾಟ ಸಮಿತಿಯ ಭಾಸ್ಕರ್ ಪ್ರಸಾದ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ಎಲ್ಲಾ ವೇದಿಕೆ ಮತ್ತು ಸಭೆಗಳಲ್ಲಿ ಒಳ ಮೀಸಲಾತಿ ಪರವಾಗಿದ್ದೇನೆ ಎಂದು ಮಾದಿಗರ ಮೂಗಿಗೆ ತುಪ್ಪ ಸವರುತ್ತಿದ್ದಾರೆ. ಆದರೆ, ಸಮೀಕ್ಷೆಯ ನೆಪದಲ್ಲಿ ಪದೇ ಪದೇ ಆಯೋಗದ ಸಮೀಕ್ಷೆಯ ದಿನಾಂಕವನ್ನು ಮುಂದೂಡುತ್ತಲೇ ಕಾಲಹರಣ ಮಾಡುತ್ತಿದ್ದಾರೆ ಎಂದರು.

ಸರ್ಕಾರ ಮತ್ತು ಮುಖ್ಯಮಂತ್ರಿಗಳು ಎಲ್.ಜಿ. ಹಾವನೂರು ವರದಿ, ಸದಾಶಿವ ಆಯೋಗದ ವರದಿ, ಕಾಂತರಾಜ್ ವರದಿ, ಮಾಧುಸ್ವಾಮಿ ವರದಿಯ ಆಧರಿಸಿ ದತ್ತಾಂಶವನ್ನು ಪಡದದು ಒಳ ಮೀಸಲಾತಿಯನ್ನು ತಕ್ಷಣವೇ ಜಾರಿ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ನಾನಾ ಹಂತದ ಬೃಹತ್ ಹೋರಾಟಗಳನ್ನು ರೂಪಿಸಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿ.ಕೆ. ರಘು, ಶಿವಶಂಕರ್, ಮಲ್ಯಪ್ಪ, ಲಕ್ಷ್ಮಣ್ ಭಂಡಾರಿ, ಪ್ರತಾಪ್, ಹನುಮಂತರೆಡ್ಡಿ, ವಿನೋದ್ ಕುಮಾರ್ ಸೇರಿ ಮೀಸಲಾತಿ ಹೋರಾಟ ಸಮಿತಿಯ ಅನೇಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande