ಕರೀಂ ಖಾನ್ ಪ್ರಶಸ್ತಿಗೆ ಪಿ ನಾರಾಯಣಪ್ಪ ಆಯ್ಕೆ
ಕರೀಂ ಖಾನ್ ಪ್ರಶಸ್ತಿಗೆ ಪಿ ನಾರಾಯಣಪ್ಪ ಆಯ್ಕೆ
ಪಿ.ನಾರಾಯಣಪ್ಪ


ಕೋಲಾರ, ೨೩ ಜೂನ್ (ಹಿ.ಸ) :

ಆ್ಯಂಕರ್ : ಕನ್ನಡ ಜಾನಪದ ಪರಿಷತ್ ನೀಡುವ ನಾಡೋಜ ಎಸ್.ಕೆ ಕರೀಂ ಖಾನ್ ಪ್ರಶಸ್ತಿಯನ್ನು ಕೋಲಾರದ ಸಾಧಕರಾದ ಪಿ ನಾರಾಯಣಪ್ಪ ಆಯ್ಕೆಯಾಗಿರುವುದಾಗಿ ರಾಜ್ಯಾಧ್ಯಕ್ಷ ಎಸ್ ಬಾಲಾಜಿ ತಿಳಿಸಿದ್ದಾರೆ.

ನಾರಾಯಣಪ್ಪ ಅವರು ಕವಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ, ಅನೇಕ ಕಾರ್ಯಕ್ರಮಗಳ ಯಶಸ್ವಿಯ ಪ್ರೇರಕರಾಗಿ ಗುರುತಿಸಿಕೊಂಡಿದ್ದಾರೆ. ಸೈನಿಕರಾಗಿ ದೇಶ ಸೇವೆ ಸಲ್ಲಿಸಿದ ನಂತರ ರಾಜ್ಯಾದ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿ ಅನೇಕ ಚುಟುಕು ಕವಿತೆ ಲೇಖನಗಳನ್ನು ಬರೆಯುತ್ತಾ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಹೆಸರುವಾಸಿಯಾಗಿದ್ದಾರೆ.

ಜಿಲ್ಲೆಯ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಅನೇಕ ಸಮಾರಂಭಗಳನ್ನು ಮಾಡಿ ಯಶಸ್ವಿಗೊಳಿಸಿದ್ದಾರೆ. ಕವನ ಸಂಕಲನವಾದ ಸಿಪಾಯಿ ಸಿಂಧೂರ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ರಾಜ್ಯಾದ್ಯಂತ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಅವರ ಮೂವತ್ತು ವರ್ಷಗಳ ಕಾಲದ ಸಾಹಿತ್ಯ ಸೇವೆಯನ್ನು ಗುರುತಿಸಿ ಇದೇ ತಿಂಗಳ ಜೂನ್ ೨೫ ರಂದು ಬುಧವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಪ್ರಶಸ್ತಿ ಸಮಾರಂಭದಲ್ಲಿ ನಿವೃತ್ತ ಐ.ಎ.ಎಸ್. ಅಧಿಕಾರಿ ಪಿ.ಸೋಮಶೇಖರ್ ಅವರ ನೇತೃತ್ವದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ರಾಜ್ಯಾಧ್ಯಕ್ಷ ಬಾಲಾಜಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರೀಂ ಖಾನ್ ಪ್ರಶಸ್ತಿ ಬಂದಿರುವುದು ಕೋಲಾರ ಜಿಲ್ಲೆಯ ಸಾಹಿತ್ಯ ಬಳಗಕ್ಕೆ ಹರ್ಷ ತಂದಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಡಾ. ಶರಣಪ್ಪ ಗಬ್ಬೂರು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಚಿತ್ರ : ಪಿ.ನಾರಾಯಣಪ್ಪ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande