ಕಳಪೆ ಫಲಿತಾಂಶಕ್ಕಾಗಿ ಶಿಕ್ಷಕರ ಮೇಲೆ ಕ್ರಮ : ಸುತ್ತೋಲೆ ವಾಪಸ್‌ಗೆ ಕಲ್ಲಂಡೂರು ನಾಗರಾಜ್ ಒತ್ತಾಯ
ಕಳಪೆ ಫಲಿತಾಂಶಕ್ಕಾಗಿ ಶಿಕ್ಷಕರ ಮೇಲೆ ಕ್ರಮ : ಸುತ್ತೋಲೆ ವಾಪಸ್‌ಗೆ ಕಲ್ಲಂಡೂರು ನಾಗರಾಜ್ ಒತ್ತಾಯ
ಜೆಡಿಯು ಮುಖಂಡ ಕಲ್ಲಂಡೂರು ಡಾ. ನಾಗರಾಜ್


ಕೋಲಾರ, ೨೩ ಜೂನ್ (ಹಿ.ಸ) :

ಆ್ಯಂಕರ್ : ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.೬೦ಕ್ಕಿಂತ ಕಡಿಮೆ ಫಲಿತಾಂಶ ಬರುವ ಅನುದಾನಿತ ಶಾಲೆಗಳ ಅನುದಾನ ಕಡಿತ ಸೇರಿ ಇತರೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ವಾಪಸ್ ಪಡೆಯುವಂತೆ ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಯು ಪಕ್ಷದ ಅಭ್ಯರ್ಥಿ ಹಾಗೂ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ಕಲ್ಲಂಡೂರು ಡಾ.ಕೆ ನಾಗರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇವಲ ಶಿಕ್ಷಕ ಸಮುದಾಯವನ್ನು ಮಾತ್ರವೇ ಗುರಿಯಾಗಿಸಿಕೊಂಡು ಹೊರಡಿಸಿರುವ ಇಲಾಖೆಯ ಆದೇಶವು ಖಂಡನೀಯವಾಗಿದ್ದು ಕೂಡಲೇ ವಾಪಸು ಪಡೆಯಬೇಕು ಅನುದಾನಿತ ಪ್ರೌಢಶಾಲೆಗಳ ನೈಜ ಸಮಸ್ಯೆಗಳನ್ನು ಸರ್ಕಾರವು ಅರಿಯದೆ ಶಿಕ್ಷಕರ ಮೇಲೆ ಕ್ರಮ ಸರಿಯಲ್ಲ ಶಿಕ್ಷಕರ ವಾರ್ಷಿಕ ವೇತನ, ಬಡ್ತಿ ತಡೆ ಹಿಡಿಯುವುದು, ಅನುದಾನ ಕಡಿತಗೊಳಿಸುವುದಾಗಿ ಹೇಳಿರುವುದು ಅವೈಜ್ಞಾನಿಕ ಕ್ರಮವಾಗಿದೆ, ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ಕೇವಲ ಶಿಕ್ಷಕರು ಮಾತ್ರವಲ್ಲದೇ ಸರ್ಕಾರದ್ದು ಜವಾಬ್ದಾರಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಶಿಕ್ಷಣ ಇಲಾಖೆಯ ಆಡಳಿತದಲ್ಲಿ, ಪಾಲಕರು ಮತ್ತು ವಿದ್ಯಾರ್ಥಿಗಳ ಪಾತ್ರವೂ ಬಹು ಮುಖ್ಯವಾಗಿ ಇರುತ್ತದೆ. ಎಲ್ಲರೂ ಒಂದು ತಂಡವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ವಿಧ್ಯಾರ್ಥಿಗಳ ಫಲಿತಾಂಶದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ ಅನಿಟ್ಟಿನಲ್ಲಿ ಸರ್ಕಾರವು ಗಮನ ಹರಿಸಬೇಕು ಎಂದು ಕಲ್ಲಂಡೂರು ಡಾ ಕೆ ನಾಗರಾಜ್ ಸರ್ಕಾರವನ್ನು ಒತ್ತಾಯಿಸಿದರು.

ಚಿತ್ರ : ಜೆಡಿಯು ಮುಖಂಡ ಕಲ್ಲಂಡೂರು ಡಾ. ನಾಗರಾಜ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande