ಶ್ರೀನಗರ, 22 ಜೂನ್ (ಹಿ.ಸ.) :
ಆ್ಯಂಕರ್ : ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಇಬ್ಬರನ್ನು ಬಂಧಿಸಿದೆ.
ಬಂಧಿತರಾದ ಪರ್ವೇಜ್ ಅಹ್ಮದ್ ಜೋಥರ್ (ಬಟ್ಕೋಟ್) ಮತ್ತು ಬಶೀರ್ ಅಹ್ಮದ್ ಜೋಥರ್ (ಪಹಲ್ಗಾಮ್, ಹಿಲ್ ಪಾರ್ಕ್) ಭಯೋತ್ಪಾದಕರಿಗೆ ಸಲಕರಣೆಗಳ ಜೊತೆಗೆ ಆಶ್ರಯ, ಆಹಾರ ಮತ್ತು ಸ್ಥಳೀಯ ಮಾರ್ಗದರ್ಶನ ಒದಗಿಸಿದ್ದಾಗಿ ಎನ್ಐಎ ತನ್ನ ತನಿಖೆಯಲ್ಲಿ ತಿಳಿಸಿದೆ. ಭಯೋತ್ಪಾದಕರು ಲಷ್ಕರ್-ಎ-ತೈಬಾ ಸಂಘಟನೆಯ ಪಾಕಿಸ್ತಾನ ಮೂಲದ ಸದಸ್ಯರಾಗಿದ್ದರು ಎಂಬುದು ದೃಢವಾಗಿದೆ.
ಎಪ್ರಿಲ್ 22 ರಂದು ನಡೆದ ಈ ದಾಳಿಯಲ್ಲಿ ಪ್ರವಾಸಿಗರನ್ನು ಧಾರ್ಮಿಕ ಗುರುತಿನ ಆಧಾರದ ಮೇಲೆ ಗುರಿ ಮಾಡಲಾಗಿತ್ತು. ಪ್ರಕರಣದ ಸಂಬಂಧ 1967ರ ಅಕ್ರಮ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 19 ಅಡಿಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa