ಇಂಫಾಲ್, 22 ಜೂನ್ (ಹಿ.ಸ.) :
ಆ್ಯಂಕರ್ : ಮಣಿಪುರದ ನಾನಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಬಂಡಾಯ ವಿರೋಧಿ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರನನ್ನು ಬಂಧಿಸಲಾಗಿದೆ. ಈ ವೇಳೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತನನ್ನು ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್) ಗೆ ಸೇರಿದ್ದ ಯಾಂಗ್ಲೆಮ್ ಸದಾನಂದ ಸಿಂಗ್ (26) ಎಂದು ಗುರುತಿಸಲಾಗಿದೆ. ಇಂಫಾಲ ಪಶ್ಚಿಮದಲ್ಲಿ ನಡೆದ ಈ ಕಾರ್ಯಾಚರಣೆ ನಂತರ, ಇಡೀ ರಾಜ್ಯದ ನಾನಾ ಜಿಲ್ಲೆಗಳ ಬೆಟ್ಟ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಶೋಧ ಕಾರ್ಯದಲ್ಲಿ .303 ರೈಫಲ್, ಎಕೆ-47, ಎಸ್ಎಲ್ಆರ್, ಇನ್ಸಾಸ್ ಎಲ್ಎಂಜಿ, ಸಿಂಗಲ್ ಬ್ಯಾರೆಲ್ ಗನ್ಗಳು, ಗ್ರೆನೇಡ್ಗಳು, ಐಇಡಿಗಳು, ಮಾರ್ಟರ್ ಬಾಂಬ್ಗಳು, ಬಾವೊಫೆಂಗ್ ರೇಡಿಯೋ ಸೆಟ್ಗಳು, ಬುಲೆಟ್ ಪ್ರೂಫ್ ಜಾಕೆಟ್ಗಳು, ಡಿಟೋನೇಟರ್ಗಳು, ಟ್ಯೂಬ್ ಲಾಂಚರ್ಗಳು ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa