ನವದೆಹಲಿ, 22 ಜೂನ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಎರಡು ದಿನ ಛತ್ತೀಸ್ಗಢ ಪ್ರವಾಸ ಕೈಗೊಂಡಿದ್ದಾರೆ.
ನವ ರಾಯ್ಪುರದ ಅಟಲ್ ನಗರದಲ್ಲಿನ ಬಂಜಾರಿ ಸೆಕ್ಟರ್-2 ನಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಗುಜರಾತ್ ಮೂಲದ ಈ ವಿಶ್ವವಿದ್ಯಾಲಯವು ಅಪರಾಧಶಾಸ್ತ್ರ, ತನಿಖಾ ಸಂಶೋಧನೆ ಮತ್ತು ವಿಧಿವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ತರಬೇತಿ ನೀಡುತ್ತದೆ. ಈ ಹೊಸ ಆವರಣದಿಂದ ಛತ್ತೀಸ್ಗಢಕ್ಕೆ ವೈಜ್ಞಾನಿಕ ತನಿಖಾ ಸೇವೆಗಳಿಗೊಂದು ಬಲವಾದ ಪೂರೈಕೆ ದೊರೆಯಲಿದೆ.
ಅಮಿತ್ ಶಾ ನಂತರ ಛತ್ತೀಸ್ಗಢ ಮತ್ತು ಸುತ್ತಮುತ್ತಲ ರಾಜ್ಯಗಳ ಡಿಜಿಪಿ ಹಾಗೂ ಎಡಿಜಿಪಿಗಳೊಂದಿಗೆ ನಕ್ಸಲ್ ನಿಗ್ರಹ ಕುರಿತ ಮಹತ್ವದ ಸಭೆ ನಡೆಸಲಿದ್ದು, ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಸಹ ಇದರಲ್ಲಿ ಭಾಗವಹಿಸಲಿದ್ದು ಸಭೆಯಲ್ಲಿ ನೂತನ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಕುರಿತು ಚರ್ಚೆಯಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa