ನವದೆಹಲಿ, 21 ಜೂನ್ (ಹಿ.ಸ.) :
ಆ್ಯಂಕರ್ : ನೈಋತ್ಯ ದೆಹಲಿ ಕಾರ್ಯಾಚರಣೆ ಕೋಶದ ತಂಡ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ವೀಸಾ ಅವಧಿ ಮೀರಿದ ಕಾರಣ ಬಂಧಿಸಿದೆ. ಚಿಕಿತ್ಸೆಗಾಗಿ ಭಾರತಕ್ಕೆ ಬಂದ ಈ ವ್ಯಕ್ತಿಗಳು, ವೀಸಾ ಮುಕ್ತಾಯವಾದ ನಂತರ ದೆಹಲಿಯ ಮಹಿಪಾಲ್ಪುರದಲ್ಲಿ ಅಕ್ರಮವಾಗಿ ವಾಸವಿದ್ದರು.
ಬಂಧಿತರು – ಮೊಹಮ್ಮದ್ ರೋಹನ್, ಸುಹೈಲ್ ಅಹ್ಮದ್, ಅಬು ಕೈಸ್ ಮತ್ತು ಮೊಹಮ್ಮದ್ ಜುಬರಾಜ್. ಇವರು ಹಲವು ಹೋಟೆಲ್ಗಳಲ್ಲಿ ತಂಗಿದ್ದಾಗಿ ತಿಳಿದು ಬಂದಿದೆ. ಎಸ್ಐ ಕಮಲ್ ಕಾಂತ್ ನೇತೃತ್ವದ ತಂಡ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿತು. ನಂತರ ಎಫ್ ಆರ್ ಆರ್ ಒ ಸಹಯೋಗದಿಂದ ಅವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa