ಕೆರೆಯಲ್ಲಿ ಮುಳುಗಿ ಮಕ್ಕಳ ಸಾವು
ಹುಬ್ಬಳ್ಳಿ, 19 ಜೂನ್ (ಹಿ.ಸ.): ಆ್ಯಂಕರ್:ಆಟವಾಡುವ ವೇಳೆ ಅವಳಿ ಗಂಡು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಯರಿನಾರಾಯಣಪುರ ಗ್ರಾಮದ ಶರೀಫ್​ಸಾಬ್ ಚಾಂದುಖಾನವರ ಅವಳಿ ಮಕ್ಕಳಾದ ಮೂರು ವರ್ಷದ ಮುದಾಸೀರ್ ಮತ್ತು ಮುಜಮ್
ಕೆರೆಯಲ್ಲಿ ಮುಳುಗಿ ಮಕ್ಕಳ ಸಾವು


ಹುಬ್ಬಳ್ಳಿ, 19 ಜೂನ್ (ಹಿ.ಸ.):

ಆ್ಯಂಕರ್:ಆಟವಾಡುವ ವೇಳೆ ಅವಳಿ ಗಂಡು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಯರಿನಾರಾಯಣಪುರ ಗ್ರಾಮದ ಶರೀಫ್​ಸಾಬ್ ಚಾಂದುಖಾನವರ ಅವಳಿ ಮಕ್ಕಳಾದ ಮೂರು ವರ್ಷದ ಮುದಾಸೀರ್ ಮತ್ತು ಮುಜಮ್ಮಿಲ್ ಆಟವಾಡುತ್ತಾ ಕೆರೆಯತ್ತ ತೆರಳಿ ಕೆರೆಯಲ್ಲಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಮಕ್ಕಳನ್ನು ಕೆರೆಯಿಂದ ಹೊರ ತೆಗೆದು ಚಿಕಿತ್ಸೆಗಾಗಿ ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಮೃತಪಟ್ಟಿವೆ

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande