ಶಿಲ್ಲಾಂಗ್, 17 ಜೂನ್ (ಹಿ.ಸ.) :
ಆ್ಯಂಕರ್ : ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ರಾಜ್ ಕುಶ್ವಾಹ ವಿಚಾರಣೆಯ ವೇಳೆ ಸೋನಮ್ ಜೊತೆ ತನ್ನಗೆ ಪ್ರೇಮ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಅವಳನ್ನು ಅಕ್ಕ ಎಂದು ಪರಿಗಣಿಸಿದ್ದೆನೆಂದು ಹೇಳಿದ ರಾಜ್ನ ಹೇಳಿಕೆಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಈ ಸಂಬಂಧ ತ್ರಿಕೋನ ಪ್ರೇಮ ಸಂಬಂಧ ಮತ್ತು ಹವಾಲಾ ಹಗರಣದ ಲಿಂಕ್ಗಳನ್ನು ತನಿಖೆ ಮಾಡುತ್ತಿದ್ದಾರೆ. ರಾಜ್, ಸೋನಮ್ ಮತ್ತು ಇತರ ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು, ಪ್ರಕರಣದ ದೃಶ್ಯ ಪುನರ್ನಿರ್ಮಾಣ ಮಾಡುವ ಸಾಧ್ಯತೆಯಿದೆ.
ಹಲವು ಪ್ರಶ್ನೆಗಳ ನಡುವೆಯೇ, ನಾವು ರಾಜಾ ಅವರನ್ನು ಕೊಂದೆವು ಎಂಬ ರಾಜ್ ಒಪ್ಪಿಕೊಳ್ಳುವ ಮಾತು ತನಿಖೆಗೆ ಹೊಸ ತಿರುವು ನೀಡಿದೆ. ಪ್ರಕರಣದ ಬಗ್ಗೆ ಪ್ರತಿದಿನ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿದ್ದು, ತನಿಖೆ ತೀವ್ರಗೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa