ಶ್ರೀನಗರ, 17 ಜೂನ್ (ಹಿ.ಸ.) :
ಆ್ಯಂಕರ್ : ಮುಂಬರುವ ಅಮರನಾಥ ಯಾತ್ರೆಗೆ ಭದ್ರತೆ ಬಲಪಡಿಸುವ ನಿಟ್ಟಿನಲ್ಲಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಜುಲೈ 1 ರಿಂದ ಆಗಸ್ಟ್ 10ರವರೆಗೆ ಯಾತ್ರಾ ಮಾರ್ಗವನ್ನು “ಹಾರಾಟ ನಿಷೇಧಿತ ವಲಯ”ವೆಂದು ಘೋಷಿಸಿದೆ.
ಪಹಲ್ಗಾಮ್ ಹಾಗೂ ಬಾಲ್ಟಾಲ್ ಮಾರ್ಗ ಸೇರಿ ಎಲ್ಲ ಯಾತ್ರಾ ಮಾರ್ಗಗಳಲ್ಲಿ ಯುಎವಿ, ಡ್ರೋನ್, ಬಲೂನ್ ಮುಂತಾದ ವೈಮಾನಿಕ ಉಪಕರಣಗಳ ಬಳಕೆ ಕಡ್ಡಾಯ ನಿಷೇಧವಾಗಿದೆ. ವೈದ್ಯಕೀಯ ಹಾಗೂ ಭದ್ರತಾ ಸಿಬ್ಬಂದಿಗೆ ಮಾತ್ರ ನಿಯಮಿತ ಎಸ್ಒಪಿ ಗಳೊಂದಿಗೆ ವಿನಾಯಿತಿ ನೀಡಲಾಗಿದೆ.
ಜುಲೈ 3ರಿಂದ ಆರಂಭವಾಗುವ ಯಾತ್ರೆಯ ಭದ್ರತೆಗೆ ಕೇಂದ್ರ ಸೇನೆಯ 580 ಕಂಪನಿಗಳನ್ನು ನಿಯೋಜಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa