ಅಹಮದಾಬಾದ್ ವಿಮಾನ ಅಪಘಾತ : ವಂಚಕರ ಬಗ್ಗೆ ಕುಟುಂಬಗಳಿಗೆ ಎಚ್ಚರಿಕೆ
ಅಹಮದಾಬಾದ್, 16 ಜೂನ್ (ಹಿ.ಸ.) : ಆ್ಯಂಕರ್ : ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳು ವಂಚನೆಗೆ ಒಳಗಾಗದಂತೆ ಎಚ್ಚರಿಕೆಯಿಂದ ಇರಬೇಕೆಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಹೆಚ್ಚುವರಿ ಸೂಪರಿಂಟೆಂಡೆಂಟ್ ಡಾ. ರಜನೀಶ್ ಪಟೇಲ್ ಮನವಿ ಮಾಡಿದ್ದಾರೆ. ಅವರು, ಈ ದುಃಖದ ಸಂದರ್ಭದಲ್ಲಿ ಕೆಲವೊಂದು
Caution


ಅಹಮದಾಬಾದ್, 16 ಜೂನ್ (ಹಿ.ಸ.) :

ಆ್ಯಂಕರ್ : ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳು ವಂಚನೆಗೆ ಒಳಗಾಗದಂತೆ ಎಚ್ಚರಿಕೆಯಿಂದ ಇರಬೇಕೆಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಹೆಚ್ಚುವರಿ ಸೂಪರಿಂಟೆಂಡೆಂಟ್ ಡಾ. ರಜನೀಶ್ ಪಟೇಲ್ ಮನವಿ ಮಾಡಿದ್ದಾರೆ.

ಅವರು, ಈ ದುಃಖದ ಸಂದರ್ಭದಲ್ಲಿ ಕೆಲವೊಂದು ಅಸಭ್ಯರು ಕುಟುಂಬಗಳ ದುರ್ಬಲತೆಯನ್ನು ದುರ್ಬಳಕೆ ಮಾಡಬಹುದು. ಯಾವುದೇ ಹಣಕಾಸಿನ ವ್ಯವಹಾರಕ್ಕೆ ಹೋಗಬೇಡಿ. ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಉಚಿತ, ಎಂದು ತಿಳಿಸಿದ್ದಾರೆ.

ಮೃತದೇಹ ಹಸ್ತಾಂತರದ ಪ್ರಕ್ರಿಯೆಗಾಗಿ ಹಣ ಬೇಡುವ ಯಾವುದೇ ಕರೆಗಳು ನಕಲಿ ಎಂದು ಎಚ್ಚರಿಕೆ ನೀಡಿದ ಅವರು, ಅಧಿಕೃತ ಸಂಪರ್ಕಗಳೆಂದರೆ ಕೇವಲ ಕೆಳಗಿನ ಮೊಬೈಲ್ ಸಂಖ್ಯೆಗಳಮೂಲಕ ಬರುವ ಕರೆಗಳಾಗಿವೆ ಎಂದಿದ್ದಾರೆ:

ಅಧಿಕೃತ ಸಂಪರ್ಕ ಸಂಖ್ಯೆ:

9429915911, 9429916096, 9429916118, 9429916378, 9429916608, 9429916622, 9429916682, 9429916758, 9429916771, 9429916875

ಅಪರಿಚಿತರಿಂದ ಬಂದ ಕರೆಗಳಿಗೆ ಪ್ರತಿಕ್ರಿಯಿಸದಂತೆ, ಯಾವುದೇ ಹಣಕಾಸಿನ ವ್ಯವಹಾರ ನಡೆಸದಂತೆ ಪೀಡಿತ ಕುಟುಂಬಗಳಿಗೆ ಆಸ್ಪತ್ರೆ ಸಂಪೂರ್ಣ ಉಚಿತ ನೆರವು ಒದಗಿಸುತ್ತಿದೆ ಎಂದು ಆಸ್ಪತ್ರೆ ಆಡಳಿತದಿಂದ ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande