ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತರೆಡ್ಡಿ
ಬಳ್ಳಾರಿ, 13 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ಹವಂಬಾವಿ ಪ್ರದೇಶದ ಹಲವು ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ, ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ಮತ್ತ
ಬಳ್ಳಾರಿ : ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತರೆಡ್ಡಿ


ಬಳ್ಳಾರಿ : ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತರೆಡ್ಡಿ


ಬಳ್ಳಾರಿ : ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತರೆಡ್ಡಿ


ಬಳ್ಳಾರಿ, 13 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ಹವಂಬಾವಿ ಪ್ರದೇಶದ ಹಲವು ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ, ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಆದೇಶಿಸಿದ್ದಾರೆ.

ವಾರ್ಡ್ ಸಂಖ್ಯೆ 36ರ ಹವಂಭಾವಿಯ ಗೋವಿಂದಯ್ಯ ಅವರ ಮನೆಯಿಂದ ರಾಮನಗರ 3ನೇ ಅಡ್ಡ ರಸ್ತೆಯವರೆಗೆ ಅಂದಾಜು 71.75 ಲಕ್ಷ ರೂ.ಗಳ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿ. ಹವಂಭಾವಿಯ ತಿಪ್ಪಯ್ಯ ಅವರ

ಮನೆಯಿಂದ ವೆಂಕಟರಾವ್ ಅವರ ಮನೆಯವರೆಗೆ, ಹನುಮಯ್ಯ ಅವರ ಮನೆಯಿಂದ ಮುಖ್ಯರಸ್ತೆವರೆಗೆ, ರಮೇಶ್ ಅವರ ಮನೆಯಿಂದ ಓಬಣ್ಣ ಅವರ ಮನೆಯವರೆಗೆ, ಮಾರೆಣ್ಣ ಅವರ ಮನೆಯಿಂದ ಆಂಟಿ ಹೊಟೇಲ್‍ವರೆಗೆ ಅಂದಾಜು 1 ಕೋಟಿ 72 ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ.

ಕೆಕೆಆರ್‍ಡಿಬಿ ಅನುದಾನದ ಅಡಿಯಲ್ಲಿ ಅಂದಾಜು 3 ಕೋಟಿ 29 ಲಕ್ಷ ರೂ.ಗಳ ವೆಚ್ಚದಲ್ಲಿ ಹವಂಭಾವಿಯ 2ನೇ ಅಡ್ಡ ರಸ್ತೆ ಮತ್ತು 3ನೇ ಅಡ್ಡ ರಸ್ತೆ ಸಂಪರ್ಕಿಸುವ ರಸ್ತೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಮಹಾನಗರ ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ವಾರ್ಡಿನ ಮುಖಂಡರಾದ ಲೋಕೇಶ್, ಭತ್ರಿ ವಾಸು, ಮಂಗಲ ರಾಮಾಂಜನೇಯ, ಯಶೋಧಾ ಮತ್ತು ಹಗರಿ ಗೋವಿಂದ, ಹೊನ್ನಪ್ಪ, ಬಿಆರ್‍ಎಲ್ ಸೀನಾ, ಭಾಸ್ಕರ್ ರಾವ್, ಉಮಾಮಹೇಶ್ವರ್ ರಾವ್, ಚಂದ್ರಶೇಖರ, ಚಿರಂಜೀವಿ, ರಾವಿರಮೇಶ್, ಸುಬ್ಬಾರಾವ್, ಜಾನಕಿರಾವ್, ಗಂಗಾಧರ್, ಪಿಚ್ಚೇಶ್ವರರಾವ್, ವಿಜಯಲಕ್ಷ್ಮೀ ಸೇರಿದಂತೆ ಹಲವರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande