ಕಾಶ್ಮೀರಕ್ಕೆ ವಂದೇ ಭಾರತ್ ರೈಲು, ಜನತೆಗೆ ಲಾಭ : ಫಾರೂಕ್ ಅಬ್ದುಲ್ಲಾ
ಶ್ರೀನಗರ, 10 ಜೂನ್ (ಹಿ.ಸ.) : ಆ್ಯಂಕರ್ : ಮಾತಾ ವೈಷ್ಣೋದೇವಿ ಕತ್ರಾ ಮತ್ತು ಶ್ರೀನಗರ ನಡುವಿನ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಇತ್ತೀಚೆಗಷ್ಟೆ ಹಸಿರು ನಿಶಾನೆ ತೋರಿದರು. ಈ ಸೇವೆ ಆರಂಭವಾದ ಬಳಿಕ ಸ್ಥಳೀಯರು ಹಾಗೂ ಪ್ರವಾಸಿಗರು ಸಂತೋಷ ವ್ಯಕ್ತಪಡಿಸಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ
ಕಾಶ್ಮೀರಕ್ಕೆ ವಂದೇ ಭಾರತ್ ರೈಲು, ಜನತೆಗೆ ಲಾಭ : ಫಾರೂಕ್ ಅಬ್ದುಲ್ಲಾ


ಶ್ರೀನಗರ, 10 ಜೂನ್ (ಹಿ.ಸ.) :

ಆ್ಯಂಕರ್ : ಮಾತಾ ವೈಷ್ಣೋದೇವಿ ಕತ್ರಾ ಮತ್ತು ಶ್ರೀನಗರ ನಡುವಿನ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಇತ್ತೀಚೆಗಷ್ಟೆ ಹಸಿರು ನಿಶಾನೆ ತೋರಿದರು. ಈ ಸೇವೆ ಆರಂಭವಾದ ಬಳಿಕ ಸ್ಥಳೀಯರು ಹಾಗೂ ಪ್ರವಾಸಿಗರು ಸಂತೋಷ ವ್ಯಕ್ತಪಡಿಸಿದ್ದಾರೆ.

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಇದು ಕಣಿವೆಯ ಜನತೆಗೆ ಮಹತ್ವದ ಲಾಭ ತರುವ ಸೇವೆಯಾಗಿದೆ. ರಸ್ತೆ ಬಂದ್ ಆಗುವ ಸಂದರ್ಭಗಳಲ್ಲಿ ಹಾಗೂ ವಿಮಾನ ದರ ಏರಿಕೆಯಿಂದ ಬಾಧಿತರಾಗುತ್ತಿದ್ದ ಜನತೆಗೆ ಈಗ ಸುಲಭ ಸಾರಿಗೆ ಸಿಗಲಿದೆ, ಎಂದರು.

ಅಲ್ಲದೆ, ತೋಟಗಾರಿಕೆ ಉತ್ಪನ್ನಗಳನ್ನು ಬೇಗ ಮಾರುಕಟ್ಟೆಗೆ ತಲುಪಿಸಲು ಈ ರೈಲು ಸಹಕಾರಿಯಾಗುತ್ತದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯುತ್ತದೆ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande