ನವದೆಹಲಿ, 10 ಜೂನ್ (ಹಿ.ಸ.) :
ಆ್ಯಂಕರ್ : ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ವತಿಯಿಂದ ಜೂನ್ 11ರಿಂದ 15ರವರೆಗೆ ದೆಹಲಿಯ ರಾಜ್ಘಾಟ್ನ ಗಾಂಧಿ ದರ್ಶನ ಸಂಕೀರ್ಣದಲ್ಲಿ ಲೋಕ ಸಂವರ್ಧನ ಪರ್ವವನ್ನು ಆಯೋಜಿಸಲಾಗಿದೆ.
ಈ ಉತ್ಸವದಲ್ಲಿ ಸರ್ಕಾರದ 11 ವರ್ಷಗಳ ಸಾಧನೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಪ್ರದರ್ಶಿಸಲಾಗುವುದು. ಉತ್ತರ ಭಾರತದ 50ಕ್ಕೂ ಹೆಚ್ಚು ಕುಶಲಕರ್ಮಿಗಳು ಪಾಲ್ಗೊಳ್ಳಲಿದ್ದು, ತಾವು ತಯಾರಿಸಿದ ಕರಕುಶಲ ವಸ್ತುಗಳನ್ನು ಪ್ರದರ್ಶಿಸುತ್ತಾರೆ. ಪಿಎಂ ವಿಕಾಸ್ ಮತ್ತು ಎನ್ಎಂಡಿಎಫ್ಸಿ ಯೋಜನೆಗಳು ಹಾಗೂ ಯಶೋಗಾಥೆಗಳೂ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಪ್ರದರ್ಶನ ಹಾಗೂ ವ್ಯಾಪಾರ ಅವಕಾಶಗಳೊಂದಿಗೆ ಈ ಉತ್ಸವ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa