ನವದೆಹಲಿ, 10 ಜೂನ್ (ಹಿ.ಸ.) :
ಆ್ಯಂಕರ್ : ಲೋಕ ಸಭೆಯ ಉಪಸಭಾಪತಿ ನೇಮಕ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಆರಂಭಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
1952 ರಿಂದ 2014ರವರೆಗೆ ಪ್ರತಿಯೊಂದು ಲೋಕಸಭೆಯಲ್ಲೂ ಉಪಸಭಾಪತಿ ಇದ್ದರೂ, 17ನೇ ಮತ್ತು ಈಗ 18ನೇ ಲೋಕಸಭೆಯೂ ಈ ಹುದ್ದೆಯನ್ನು ಖಾಲಿ ಇಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಎಂದು ಖರ್ಗೆ ಆಕ್ಷೇಪಿಸಿದ್ದಾರೆ.
ಈ ಹುದ್ದೆಯನ್ನು ಪ್ರತಿ ಪಕ್ಷದ ಸದಸ್ಯರಿಗೆ ನೀಡುವ ಸಂಪ್ರದಾಯವಿದೆ ಎಂದು ಉಲ್ಲೇಖಿಸಿ, ಸಾಂವಿಧಾನಿಕ ಸಮತೋಲನವನ್ನು ಪುನಃ ಸ್ಥಾಪಿಸಬೇಕು ಎಂದು ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa