ಲಕ್ನೋ, 10 ಜೂನ್ (ಹಿ.ಸ.) :
ಆ್ಯಂಕರ್ : ಮೋದಿ ನೇತೃತ್ವದ ಕೇಂದ್ರ ಸರ್ಕಾರವು 11 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಅವಧಿಯನ್ನು ಸೇವಾ, ಸುಶಾಸನ ಮತ್ತು ಸರ್ವಾಂಗೀಣ ಕಲ್ಯಾಣದ ಸುವರ್ಣ ಯುಗ ಎಂದು ಹೇಳಿದ್ದಾರೆ.
ಲಕ್ನೋದಲ್ಲಿನ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಅವರ ಉಪಸ್ಥಿತಿಯಲ್ಲಿ ಯೋಗಿ ಮಾತನಾಡಿದರು.
“ಪ್ರಧಾನಿ ಮೋದಿಯವರು 140 ಕೋಟಿ ಜನತೆಗೆ ವಿಶ್ವಾಸದ ಸಂಕೇತವಾಗಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ, ತುಷ್ಟೀಕರಣ ರಾಜಕೀಯಕ್ಕೆ ಕಡಿವಾಣ, 370 ನೇ ವಿಧಿ ರದ್ದು ಇವು ದೇಶವನ್ನು ಒಂದೊಂದಾಗಿ ಶಕ್ತಿ ಕೇಂದ್ರವನ್ನಾಗಿ ಮಾಡಿವೆ” ಎಂದು ಹೇಳಿದರು.
“ಭಾರತ ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕಶಕ್ತಿಯಾಗಿದೆ. 2027ರ ವೇಳೆಗೆ ಮೂರನೇ ಸ್ಥಾನಕ್ಕೇರಲಿದೆ,” ಎಂದಿರುವ ಅವರು ರಸ್ತೆ ನಿರ್ಮಾಣದ ದರ, ಗ್ರಾಮೀಣ ಬಂಡವಾಳ ಹೂಡಿಕೆ, ಮೆಟ್ರೋ ಸೇವೆಗಳ ವಿಸ್ತರಣೆ, ರೈತರ ಆದಾಯದ ಬೆಳವಣಿಗೆ, ಮಹಿಳಾ ಸಬಲೀಕರಣ – ಎಲ್ಲವೂ ಈ ಆಡಳಿತದ ಸಾಧನೆಗಳೆಂದು ವಿವರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa