ಧಾರವಾಡ, 1 ಜೂನ್ (ಹಿ.ಸ.):
ಆ್ಯಂಕರ್:
ಧಾರವಾಡ ಜಿಲ್ಲೆಯಾದ್ಯಂತ ಮುಂಗಾರು ಮಳೆ ಆಶಾದಾಯಕವಾಗಿದ್ದು, ಪೂರ್ವ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 113.3 ಎಮ್ಎಮ್ ಇದ್ದ ವಾಡಿಕೆ ಮಳೆ, ವಾಡಿಕೆಗಿಂತ ಹೆಚ್ಚಿಗೆ ಅಂದರೆ 221.4 ಎಮ್ಎಮ್ ಮಳೆಯಾಗಿರುತ್ತದೆ. ರೈತರು ಕೃಷಿ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದು ಬಿತ್ತನೆಗೆ ಅಗತ್ಯ ಬೀಜ, ಗೊಬ್ಬರ ಪೂರೈಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯ ಗುರಿಯನ್ನು 2,81,595 ಹೆಕ್ಟೆರ್ ಪ್ರದೇಶದಲ್ಲಿ ಹೊಂದಲಾಗಿದೆ.
ಬಿತ್ತನೆಯು ಅಳ್ನಾವರ ತಾಲೂಕಿನಲ್ಲಿ 5,686 ಹೆಕ್ಟೆರ್, ಧಾರವಾಡ ತಾಲೂಕಿನಲ್ಲಿ 58,029 ಹೆಕ್ಟೆರ್, ಕಲಘಟಗಿ ತಾಲೂಕಿನಲ್ಲಿ 37,869 ಹೆಕ್ಟೆರ್, ಹುಬ್ಬಳ್ಳಿ ತಾಲೂಕಿನಲ್ಲಿ 35,766 ಹೆಕ್ಟೆರ್, ಹುಬ್ಬಳ್ಳಿ ನಗರ ತಾಲೂಕಿನಲ್ಲಿ 6,719 ಹೆಕ್ಟೆರ್, ಕುಂದಗೋಳ ತಾಲೂಕಿನಲ್ಲಿ 52,298 ಹೆಕ್ಟೆರ್, ನವಲಗುಂದ ತಾಲೂಕಿನಲ್ಲಿ 59,042 ಹೆಕ್ಟೆರ್, ಅಣ್ಣಿಗೇರಿ ತಾಲೂಕಿನಲ್ಲಿ 26,186 ಹೆಕ್ಟೆರ್ ಹೀಗೆ ಒಟ್ಟು 2,81,595 ಹೆಕ್ಟೆರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa