ಕೋಲಾರ, ೦೧ ಜೂನ್ (ಹಿ.ಸ) :
ಆ್ಯಂಕರ್ : ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಗರದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದೇಶ ಕಂಡ ಅಪ್ರತಿಮ ಸಮಾಜ-ಸುಧಾರಕಿ, ರಾಜಮಾತೆ ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದ ಅಹಲ್ಯಾಬಾಯಿ ಹೋಳ್ಕರ್ ರವರ ೩೦೧ನೇ ಜನ್ಮದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾರಾಯಣಪ್ಪ, ಅಹಳ್ಯಾಬಾಯಿ ಹೋಳ್ಕರ್ರವರ ಇತಿಹಾಸ-ಸಾಧನೆ-ಜೀವನ ಚರಿತ್ರೆ-ಪ್ರಸ್ತುತ ಕಾಲಘಟ್ಟಕ್ಕೆ ಔಚಿತ್ಯ - ಜಯಂತಿ ಆಚರಣೆ ಬಗ್ಗೆ ವಿವರವಾಗಿ ತಿಳಿಸಿದರು.
ಮಹಿಳಾ ಶಿಕ್ಷಣಕ್ಕಾಗಿ ಅವರು ಮಾಡಿದ ಅಪ್ರತಿಮ ಸೇವೆ, ಸಮಾಜವನ್ನು ಎದುರು ಹಾಕಿಕೊಂಡು ಅಕ್ಷರ ಕಲಿಸಿದ ಆ ಮಾತೆಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿ, ಶಾಲೆಗಳಲ್ಲಿ ಅವರ ಜೀವನ ಚರಿತ್ರೆ ಕುರಿತು ಮಕ್ಕಳಿಗೆ ತಿಳಿಸುವ ಕೆಲಸವಾಗಲಿ ಎಂದು ಆಶಿಸಿದರು.
ನಿವೃತ್ತ ಎ.ಎಸ್.ಐ, ಸಮಾಜ ಸೇವಕರು ಗೌರಿ ಪೇಟೆಯ ಶ್ರೀ.ರವೀಂದ್ರನಾಥ್ ರವರು ಹೋಳ್ಕರ್ ರವರ ಸಾಮಾಜಿಕ ಚಿಂತನೆ, ಶಾಲೆಗಳು, ಕೈಗಾರಿಕೆಗಳ ಸ್ಥಾಪನೆ, ತನ್ನ ಸಂಸ್ಥಾನದ ಮಿಲಿಟರಿ ಪಡೆಯ ನಿರ್ಮಾಣ, ಸಾಂಸ್ಕçöÈತಿಕ ರಕ್ಷಣೆ, ಸಮಾಜಕ್ಕೆ ಅವರು ನೀಡಿದ ಮಾರ್ಗದರ್ಶನದ ಕುರಿತು ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಕೆ.ಟಿ.ಶಿವಕುಮಾರ್ ಮಾತನಾಡಿ, ಭಾರತೀಯ ಇತಿಹಾಸದ ೧೭ನೇ ಶತಮಾನದಲ್ಲಿ ತನ್ನ ಪತಿ ಹಾಗೂ ಮಗನನ್ನು ಕಳೆದುಕೊಂಡ ನಂತರ, ತನ್ನ ಮಾವನ ಆದೇಶ ಮತ್ತು ಉಪದೇಶವನ್ನು ಆಲಿಸಿ, ಸತಿ ಸಹಗಮನವನ್ನು ಧಿಕ್ಕರಿಸಿದವರು ಅಹಳ್ಯಾಬಾಯಿ ಹೋಳ್ಕರ್ ಅವರು ಎಂದರು.
ಮರಾಠಿ ಸಾಮ್ರಾಜ್ಯದ ಇಂದೋರ್ ಸಂಸ್ಥಾನದ ರಾಜಮಾತೆಯಾಗಿ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕತಿಕ ಪ್ರಗತಿಯ ಜೊತೆಗೆ ಉತ್ತಮ ಆಡಳಿತ, ಸಾಮಾಜಿಕ ಕಲ್ಯಾಣ ಮತ್ತು ಮಾನವೀಯ ಕಾರ್ಯಗಳನ್ನು ನಿರ್ವಹಿಸಿ ಯಶಸ್ವಿಯಾದ ದಿಟ್ಟ-ಮಹಿಳೆ ಎಂದು ಹೆಸರುವಾಸಿಯಾಗಿದ್ದಾರೆ.
ದೇವಾಲಯಗಳು , ಘಾಟ್ಗಳು ಮತ್ತು ಧರ್ಮಶಾಲೆಗಳ ನಿಯೋಜನೆಯ ಮೂಲಕ ಭಾರತೀಯ ವಾಸ್ತುಶಿಲ್ಪದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಅಹಲ್ಯಾಬಾಯಿರವರು ಸ್ಥಾಪಿಸಲಾದ ಮಠ - ಮಂದಿರ, ಕಾಶೀ ವಿಶ್ವನಾಥ ಇನ್ನೂ ಅನೇಕ ದೇವಾಲಯಗಳು ಜೀರ್ಣೋದ್ದಾರ ಕಾರ್ಯ, ಧಾರ್ಮಿಕ ದತ್ತಿಗಳು, ಭಾರತದಾದ್ಯಂತ ಹರಡಿವೆ ಎಂದರು.
ಅವರನ್ನು ಸಾಧ್ವಿ ಅಥವಾ ಪವಿತ್ರ ಮಹಿಳೆ ಎಂದು ಸ್ಮರಿಸಲಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯ ಗೋಪಾಲ್ ವಹಿಸಿದ್ದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ವಾಣೀಶ್ರೀ, ಲಕ್ಷಿ÷್ಮ, ಪುಷ್ಪ, ಸುಜಾತಮ್ಮ ಭಾಗವಹಿಸಿದ್ದರು.
ಚಿತ್ರ ; ಕೋಲಾರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಗರದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಹಲ್ಯಾಬಾಯಿ ಹೋಳ್ಕರ್ ರವರ ೩೦೧ನೇ ಜನ್ಮದಿನವನ್ನು ಆಚರಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್