ಬಳ್ಳಾರಿ, 1 ಜೂನ್ (ಹಿ.ಸ.)
ಆ್ಯಂಕರ್:
ಹಗರಿಬೊಮ್ಮನಹಳ್ಳಿ ತಾಲೂಕಿನ ನಂದೀಪುರ ಮಠದ ಶ್ರೀಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ 21ನೇ ಪುಣ್ಯಸ್ಮನೋತ್ಸವವು ಬಳ್ಳಾರಿ ಬಸವನದಲ್ಲಿ ಜೂನ್ 4 ರ ಬುಧವಾರ ನಡೆಯಲಿದೆ ಎಂದು ಪರಮಪೂಜ್ಯ ಡಾ. ಮಹೇಶ್ವರ ಸ್ವಾಮಿಗಳು ತಿಳಿಸಿದ್ದಾರೆ.
ಶ್ರೀ ಶಿವಶರಣ ಸಕ್ಕರೆ ಕರಡೆಪ್ಪ ಚೌಕಿಯಲ್ಲಿ ಸುದ್ದಿಗಾರರಿಗೆ ಭಾನುವಾರ ಈ ಮಾಹಿತಿ ನೀಡಿ, ಜೂನ್ 4 ರ ಬುಧವಾರ ಬೆಳಗ್ಗೆ 8 ಕ್ಕೆ ಕನಕದುರ್ಗಮ್ಮ ದೇವಸ್ಥಾನದಿಂದ ಬಸವಭವನದ ವರೆಗೆ ನಂದಿಕೋಲು ಡೋಲು ಡೊಳ್ಳು ಕಳಶ ಕುಂಭ ಶಬ್ದ ಚಿತ್ರ ಸಕಲ ಮಂಗಳವಾದ್ಯಗಳೊಂದಿಗೆ ಶ್ರೀಮದ್ ಉಜ್ಜಯಿನಿ ಜಗದ್ಗುರು ಇವರ ಸಾನಿಧ್ಯದಲ್ಲಿ ಸಕಲ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಶ್ರೀ ರೇಣುಕಾಚಾರ್ಯ, ಬಸವಣ್ಣ ಮತ್ತು ಪೂಜ್ಯ ಶ್ರೀ ಚರಂತಪ್ಪಜ್ಜ ಅವರ ಭಾವಚಿತ್ರದ ಭವ್ಯ ಮೆರವಣಿಗೆ. ಈ ಮೆರವಣಿಗೆಯನ್ನು ಗುರು ಚರಂತಾರ್ಯ ಮಹಾಸ್ವಾಮಿಗಳ ಉತ್ಸವ ಸೇವಾ ಸಮಿತಿಯ ಅಧ್ಯಕ್ಷ ಎ.ಬಿ. ಬಸವರಾಜ್ ಅವರು ಉದ್ಘಾಟಿಸುವರು.
ಸಿದ್ದರಾಮ ಕಲ್ಮಠ ಅವರು ವೇದಿಕೆಯಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬಿಚ್ಚಗಲ್ ಪಂಚಾಕ್ಷರಪ್ಪ ಅವರು ಸ್ವಾಗತ ಕೋರುವರು. ಬಂಡ್ರಾಳ್
ಮೃತ್ಯುಂಜಯ ಸ್ವಾಮಿ, ಶಿಕ್ಷಕ ಅಮಾತಿ ಬಸವರಾಜ್, ರಾಜಶ್ರೀ ಪಾಟೀಲ್, ಸವಿತಾ ಸೋನಾಲಿ ಮತ್ತು ಉಮಾದೇವಿ ಕಾರ್ಯಕ್ರಮ ನಿರೂಪಿಸುವರು.
ಡಾ. ಎನ್. ಶಿವಮೂರ್ತಿ ಅವರು ರಚಿಸಿರುವ `ದಿವ್ಯ ಪ್ರಕಾಶ' ಮತ್ತು ಎಸ್.ವಿ. ಪಾಟೀಲ್ ಗುಂಡೂರು ಅವರು ರಚಿಸಿರುವ `ನಡೆದಾಡುವ ದೇವರು' ದಿವ್ಯ ದರ್ಶನ ಭಾಗ 1 ಮತ್ತು 2ರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಪ್ರಧಾನ ಸಂಪಾದಕರಾಗಿ ಭಿಕ್ಷಾವರ್ತಿ ಮಠ ಸಾಹಿತಿಗಳು ಹರಿಹರ, ಎಸ್. ಪಾಟೀಲ್ ಗುಂಡೂರು ಅವರು ವೇದಿಕೆಯಲ್ಲಿರುವರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ `ಗುರು ಚರಂತಾರ್ಯ ಶ್ರೀ' ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಗಂಗಾವತಿಯ ಸಾಹಿತಿ ಎಸ್.ವಿ. ಪಾಟೀಲ್ ಗುಂಡೂರು ಅವರು ರಚಿಸಿದ ಸುಮಾರು 575 ಕೃತಿಗಳ ಪ್ರದರ್ಶನ ಮತ್ತು ಮಾರಾಟವನ್ನು ವಿಎಸ್ಕೆ ವಿವಿಯ ಕುಲಸಚಿವ ಎಸ್.ಎನ್. ರುದ್ರೇಶ್ ಅವರು ಉದ್ಘಾಟಿಸಲಿದ್ದಾರೆ.
ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಹೃದಯ, ಎಲುಬು ಮತ್ತು ಕೀಲು, ದಂತ, ನೇತ್ರ ಸ್ತ್ರೀರೋಗ ಹಾಗೂ ಚರ್ಮರೋಗ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ಮತ್ತು ಉಚಿತವಾಗಿ ಔಷಧಿಗಳ ವಿತರಣೆಯೂ ಈ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದರು.
ಕಲ್ಯಾಣಮಠದ ಕಲ್ಯಾಣ ಶ್ರೀಗಳು, ನಂದೀಪುರಜ್ಜನವರ ಸಾಧನೆ, ದೂರದೃಷ್ಟಿ ಮತ್ತು ವಾಕ್ಸಿದ್ಧಿಗಳ ಕುರಿತು ಹೇಳಿ, ಚರಂತಪ್ಪಜ್ಜನವರ ಭಕ್ತಾಧಿಗಳು ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿದ್ದಾರೆ. ಸಮಾಜಮುಖಿಯಾಗಿರುವ ಶ್ರೀಗಳ ಪುತ್ರ ಡಾ. ಮಹೇಶ್ವರಸ್ವಾಮೀಜಿ ಅವರು ಸಮಾಜಸೇವೆ, ಆಧುನಿಕ - ಸಾವಯವ ಕೃಷಿ, ಮೀನು ಸಾಕಾಣಿಕೆ, ಕೆರೆಗಳಿಗೆ ನೀರು ತುಂಬುವ ಮೂಲಕ ಮೌನ ಸಾಧನೆಗಳನ್ನು ಮಾಡಿದ್ದಾರೆ ಎಂದರು.
ಶಂಭುಲಿಂಗ ಸ್ವಾಮಿ, ನಿವೃತ್ತ ಪ್ರಾಂಶುಪಾಲರಾದ ಜಯಪ್ರಕಾಶ್ ಗೌಡ, ಮೆಟ್ರಿ ಮೃತ್ಯುಂಜಯ, ಬಿಚ್ಚುಗಲ್ ಪಂಚಾಕ್ಷರಪ್ಪ, ಗಂಗಾವತಿ ವೀರೇಶ್, ಎಚ್.ಕೆ. ಗೌರಿಶಂಕರ್, ಕೋಳೂರು ಚಂದ್ರಶೇಖರಗೌಡ, ಬಿ. ಮಹಾಲಿಂಗಯ್ಯ (ರಾಜಣ್ಣ), ದುರ್ಗೇಶ್ ಉಪ್ಪಾರ್, ಬಿ.ಎಂ. ಎರ್ರಿಸ್ವಾಮಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್