ರಾಯಚೂರು , 30 ಮೇ (ಹಿ.ಸ.) :
ಆ್ಯಂಕರ್ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದ ಜಾನುವಾರು ಮಾರುಕಟ್ಟೆ ಪ್ರಾಂಗಣದ ಪಕ್ಕದ ಪೇಟೆ ಕಾರ್ಯಕರ್ತರಿಗೆ ಹಂಚಿಕೆಯಾಗಿರುವ ನಿವೇಶನವನ್ನು ಕಾರಣಾಂತರಗಳಿಂದ ಬೇರೆಯವರಿಗೆ ನಿವೇಶನ ಸಹಿತ ಕಟ್ಟಡವನ್ನು ವರ್ಗಾವಣೆ ಹಾಗೂ ಮಾರಾಟ ಮಾಡಿಕೊಡಲು ಅರ್ಜಿ ಸಲ್ಲಿಸಲಾಗಿದ್ದು, ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿದೆ.
ಚಾಗಿ ವೆಂಕಟೇಶ್ ಮಾಲೀಕರು ಶ್ರೀ ಲಕ್ಷ್ಮೀ ನಾರಾಯಣ ಕಿರಾಣಿ ಮರ್ಚಂಟ್ಸ್ ರಾಯಚೂರು ಇವರಿಗೆ ಮೊದಲು ಹಂಚಿಕೆಯಾಗಿದ್ದು, ಚಾಗಿ ರಾಜೇಶ್ವರಿ ಮಾಲೀಕರು ವರುಣ್ ಟ್ರೇಡರ್ಸ್ ರಾಯಚೂರು ಇವರಿಗೆ ವರ್ಗಾವಣೆ ಮಾಡಬೇಕಾಗಿದ್ದು, ನಿವೇಶನ ಸಹಿತ ಕಟ್ಟಡವನ್ನು ವರ್ಗಾವಣೆ ಹಾಗೂ ಮಾರಾಟ ಮಾಡುವ ಸಂಬಂಧ ಯಾರಿಂದಲಾದರೂ ಆಕ್ಷೇಪಣೆಗಳು ಇದ್ದಲ್ಲಿ ಅಥವಾ ಯಾವುದೇ ಪೇಟೆ ಕಾರ್ಯಕರ್ತ, ರೈತ ಹಾಗೂ ವರ್ತಕರಿಂದ ಏನಾದರೂ ಬರಬೇಕಾದ ಬಾಕಿ ಮೊತ್ತ ಇದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಈ ಪ್ರಕಟಣೆ ಹೊರಡಿಸಿದ 10 ದಿನಗಳೊಳಗಾಗಿ ಈ ಕಾರ್ಯಾಲಯಕ್ಕೆ ಅರ್ಜಿ ಮನವಿಯನ್ನು ಸಲ್ಲಿಸತಕ್ಕದ್ದು, ತದನಂತರ ಬಂದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ನಿಗದಿತ ದಿನಗಳೊಳಗಾಗಿ ಯಾವುದೇ ಆಕ್ಷೇಪಣೆಗಳು ಬಾರದೇ ಇದ್ದಲ್ಲಿ, ಈ ವರ್ಗಾವಣೆ, ಮಾರಾಟ ಪ್ರಕ್ರಿಯೆಯನ್ನು ಜರುಗಿಸಲು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್