ಖೈನಿಯಿಂದ ಜೀವಭಯ : ವೈದ್ಯರ ಜಾಗ್ರತೆಯಿಂದ ಇಬ್ಬರ ಜೀವ ರಕ್ಷಣೆ
ಶಿವಮೊಗ್ಗ, 30 ಮೇ (ಹಿ.ಸ.) : ಆ್ಯಂಕರ್ : ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ, ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ತಂಬಾಕು ಚಟದಿಂದ ಉಂಟಾದ ಗಂಭೀರ ಸಮಸ್ಯೆಗಳಿಂದ ಇಬ್ಬರ ಪ್ರಾಣ ರಕ್ಷಿಸಿದ್ದಾರೆ. ಮೊದಲ ಪ್ರಕರಣದಲ್ಲಿ, 48 ವರ್ಷದ ಮಹಿಳೆ 15 ವರ್ಷಗಳಿಂದ ಖೈನಿಯನ್ನ
Khaine


ಶಿವಮೊಗ್ಗ, 30 ಮೇ (ಹಿ.ಸ.) :

ಆ್ಯಂಕರ್ : ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ, ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ತಂಬಾಕು ಚಟದಿಂದ ಉಂಟಾದ ಗಂಭೀರ ಸಮಸ್ಯೆಗಳಿಂದ ಇಬ್ಬರ ಪ್ರಾಣ ರಕ್ಷಿಸಿದ್ದಾರೆ.

ಮೊದಲ ಪ್ರಕರಣದಲ್ಲಿ, 48 ವರ್ಷದ ಮಹಿಳೆ 15 ವರ್ಷಗಳಿಂದ ಖೈನಿಯನ್ನು ಬಾಯಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸ ಹೊಂದಿದ್ದರು. ಬಾಯಿಯಲ್ಲಿ ಗಾಯ ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದರಿಂದ ಕ್ಯಾನ್ಸರ್‌ಗೆ ಆಗುವುದಕ್ಕಿಂತ ಮುನ್ನವೇ ಶಸ್ತ್ರಚಿಕಿತ್ಸೆ ಮೂಲಕ ತೇಪೆಗಳನ್ನು ತೆಗೆದುಹಾಕಿ ಮುಂದಿನ‌ ಅನಾಹುತ ತಪ್ಪಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, 26 ವರ್ಷದ ಯುವತಿಯು ಗುಟ್ಕಾ ಸೇವನೆಯಿಂದ ಓರಲ್ ಸಬ್‌ಮ್ಯೂಕಸ್ ಫೈಬ್ರೋಸಿಸ್‌ನಿಂದ ಬಳಲುತ್ತಿದ್ದು, ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿ ಯುವತಿಯ ಪ್ರಾಣ ರಕ್ಷಿಸಿದ್ದಾರೆ.

ಡಾ. ದೀಪಕ್ ಸಿ. ಕಿತ್ತೂರ್ ಮತ್ತು ತಂಡ ಈ ಎರಡು ಪ್ರಕರಣಗಳಲ್ಲಿ ತ್ವರಿತ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. “ಬಾಯಲ್ಲಿ ಖೈನಿಯನ್ನು ಗಂಟೆಗಳ ಕಾಲ ಇಡುವುದು ಗಂಭೀರ ಪರಿಣಾಮಗಳಿಗೆ ದಾರಿ ಮಾಡುತ್ತದೆ. ಪ್ರಾಥಮಿಕ ಪತ್ತೆ ಮತ್ತು ಸಮಯೋಪಯೋಗಿ ಚಿಕಿತ್ಸೆಯೇ ರಕ್ಷೆಯ ಮಾರ್ಗವಾಗಿದ್ದು ಯುವ ಜನತೆ ಜಾಗ್ರತೆ ವಹಿಸುವಂತೆ ಡಾ.ದೀಪಕ್ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande